Advertisement

ಮಹಿಳೆಯರಿಗೆ ಕಾನೂನು ಜ್ಞಾನ ಅಗತ್ಯ

05:06 PM Jan 23, 2018 | Team Udayavani |

ಹಟ್ಟಿ ಚಿನ್ನದ ಗಣಿ: ಮಹಿಳೆಯರು ಕಾನೂನಿನ ಅರಿವು ಪಡೆದು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ವಕೀಲರಾದ ಸೈಯ್ಯದ್‌ ಶಂಶುದ್ದೀನ್‌ ಹೇಳಿದರು. ಸ್ಥಳಿಯ ವಿನಾಯಕ ವಿದ್ಯಾಸಂಸ್ತೆ ಹಾಗೂ ಎನ್‌ಎಸ್‌ಎಸ್‌ ತಂಡ ರಾಮ್‌ ರಹೀಮ್‌ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಜ್ಜೆ ಹೆಜ್ಜೆಗೂ ಕಾನೂನು ಅವಶ್ಯಕವಾಗಿದೆ. ಮಹಿಳೆಯರು ಕಾನೂನು ತಿಳಿವಳಿಕೆ ನೀಡುವ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಆಸರೆ ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಂಗನಾಥ ಸಾಂಕ್ರಾಮಿಕ ರೋಗಗಳ ಬಗ್ಗೆ ಉಪನ್ಯಾಸ ನೀಡಿ, ಕುಟುಂಬ ಮತ್ತು ಸಮಾಜದ ಆರೋಗ್ಯ ರಕ್ಷಣೆಗಾಗಿ ಮನೆ ಮತ್ತು ಸುತ್ತಮುತ್ತ ಸ್ವತ್ಛತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ ಎಂದು
ಹೇಳಿದರು. ಡಾ| ಪ್ರಿಯದರ್ಶಿನಿ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನರಸಪ್ಪಯಾದವ್‌, ಮಹೇಂದ್ರ ಕುರ್ಡಿ, ಗ್ರಾಪಂ ಸದಸ್ಯರಾದ ನಿಂಗಪ್ಪ, ಭೀಮಾಶಂಕರ, ಶರಣುಗೌಡ ಗುರಿಕಾರ, ಪ್ರಭು ಬಡಿಗೇರ ಇತರರು ಕಾಲೋನಿಯ ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next