Advertisement

ಶಬರಿಮಲೆಗೆ ಬರುವ ಮಹಿಳೆಯರನ್ನು ಸೀಳಿ ಹಾಕಬೇಕು!; ಕೊಲ್ಲಂ ತುಳಸಿ 

04:10 PM Oct 12, 2018 | |

ಕೊಲ್ಲಂ: ಶಬರಿಮಲೆ ಅಯ್ಯಪ್ಪ ದೇಗುಲವನ್ನು ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ತೀರ್ಪಿಗೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಭಟನೆಗಳೂ ಹೆಚ್ಚುತ್ತಿವೆ. ಪ್ರತಿಭಟನಾ ಸಭೆಯೊಂದರಲ್ಲಿ  ಹಿರಿಯ ಮಲಯಾಳಂ ನಟ ಕೊಲ್ಲಂ ತುಳಸಿ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. 

Advertisement

ಕೊಲ್ಲಂನಲ್ಲಿ ಶುಕ್ರವಾರ ನಡೆದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೊಲ್ಲಂ ತುಳಸಿ ಶಬರಿಮಲೆಗೆ ಬರುವ ಮಹಿಳೆಯರನ್ನು ಸೀಳಿ ಹಾಕಬೇಕು. ಅರ್ಧ ಭಾಗವನ್ನು ದೆಹಲಿಗೆ ಕಳುಹಿಸಬೇಕು,ಇನ್ನರ್ಧ ಭಾಗವನ್ನು ತಿರುವನಂತಪುರಂನ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. 

ಕೊಲ್ಲಂ ತುಳಸಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next