Advertisement

Brahmavar ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಕಳವು

12:17 AM Dec 09, 2023 | Team Udayavani |

ಬ್ರಹ್ಮಾವರ: ಬಸ್‌ನಲ್ಲಿ ಚಿನ್ನದ ಸರ ಕಳವಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಕುಂದಾಪುರದ ಶಕುಂತಳಾ ಅವರು ಗುರುವಾರ ಬ್ರಹ್ಮಾವರದಲ್ಲಿ ನಡೆಯುವ ಮದುವೆಗೆ ಬಸ್‌ನಲ್ಲಿ ಆಗಮಿಸಿದ್ದರು.

Advertisement

ಬಸ್‌ಸ್ಟ್ಯಾಂಡ್ ದಾಟಿದಾಗ ಎದ್ದು ನಿಂತು ಬಾಗಿಲ ಬಳಿ ಬಂದಿದ್ದರು. ಈ ಸಂದರ್ಭ ಬಹಳಷ್ಟು ಮಂದಿ ಮಹಿಳೆಯರು ಇದ್ದು, ಇವರ ಹಿಂದೆ ಮತ್ತು ಮುಂದೆ ಈರ್ವರು ಅಪರಿಚಿತ ಮಹಿಳೆಯರಿದ್ದರು. ಎಸ್‌.ಎಂ.ಎಸ್‌. ಬಸ್‌ಸ್ಟ್ಯಾಂಡ್ ನ‌ಲ್ಲಿ ಇಳಿದು ಸಭಾಂಗಣಕ್ಕೆ ತೆರಳುವಾಗ ಧರಿಸಿದ್ದ 35 ಗ್ರಾಂನ ಗೋಧಿಮಣಿಯ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next