Advertisement

ಭೀಮಾ‌ನದಿ ಸೇತುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನು ರಕ್ಷಿಸಿದ ಪೊಲೀಸ್

02:06 PM Jan 03, 2021 | Team Udayavani |

ಕಲಬುರಗಿ: ಭೀಮಾ‌ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ ಘಟನೆ ಜಿಲ್ಲೆಯ ಕಟ್ಟಿಸಂಗಾವಿ ಬಳಿಯ ಭೀಮಾ ನದಿ ಸೇತುವೆಯಲ್ಲಿ ನಡೆದಿದೆ.

Advertisement

ಆಳಂದ ಮೂಲದ ಗುರುಬಾಯಿ (60) ಎಂಬ ವೃದ್ದೆ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ತಿಸುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಜೇವರ್ಗಿ ಪೊಲೀಸ್ ಠಾಣೆ ಪೇದೆ ಅನಿಲ್‌ ಕುಮಾರ್ ಆಕೆಯನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ವಿಟ್ಲಪಡ್ನೂರು: ಅತ್ತೆಯ ಎದುರೇ ನಾದಿನಿಯ ಅತ್ಯಾಚಾರಗೈದು ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ

ಗಸ್ತಿನಲ್ಲಿದ್ದ ಪೇದೆ ಅನಿಲ್‌ ಕುಮಾರ್ ಸೇತುವೆ ಬಳಿ ಬಂದಾಗ ಗುರುಬಾಯಿ ಅವರು ಭೀಮಾ ಸೇತುವೆಯ ಕಬ್ಬಿಣದ ರಾಡಿಗೆ ಜೋತು ಬಿದ್ದಿದ್ದರು. ಜನವರಿ ಒಂದರಂದು ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next