Advertisement

ಪೌರತ್ವ ಪ್ರತಿಭಟನೆ:ಅಂಗಡಿ ಮುಚ್ಚಿಸಲು ಯತ್ನಿಸಿದ ಪ್ರತಿಭಟನಾಕಾರರಿಗೆ ಖಾರದಹುಡಿ ಎರಚಿದ ಮಹಿಳೆ

09:50 AM Jan 31, 2020 | Mithun PG |

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಅಂಗಡಿಯೊಂದರ ಬಾಗಿಲನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದಾಗ ಮಾಲಕಿ ಖಾರದ ಪುಡಿಯನ್ನು ಎರಚಿದ ಘಟನೆ ಯವತ್ಮಾಲ್ ಎಂಬಲ್ಲಿ ನಡೆದಿದೆ.

Advertisement

ಸಿಎಎ, ಎನ್ ಸಿಆರ್, ಎನ್ ಆರ್ ಪಿ ವಿರೋಧಿಸಿ ವಿವಿಧ ಸಂಘಟನೆಗಳು ಮುಂಬೈನಲ್ಲಿ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ  ರಸ್ತೆಗಿಳಿದಿದ್ದ ಪ್ರತಿಭಟನಾಕಾರರು ಅಂಗಡಿಯೊಂದರ ಬಾಗಿಲನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ್ದಾರೆ. ಈ ವೇಳೆ ಅಂಗಡಿ ಮಾಲಕಿ ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಆದರೂ ಪ್ರತಿಭಟನಾಕಾರರ ಗುಂಪು ಅಂಗಡಿಯ ಬಾಗಿಲನ್ನು ಮುಚ್ಚಲು ಯತ್ನಿಸಿದಾಗ ಕುಪಿತಗೊಂಡ ಮಹಿಳೆ ಖಾರದ ಪುಡಿಯನ್ನು ತಂದು ಪ್ರತಿಭಟನಾಕಾರರಿಗೆ ಎರಚಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next