Advertisement

ಧೀರೇಂದ್ರ ಶಾಸ್ತ್ರಿ ಸಮಾರಂಭದಲ್ಲಿ ಮಹಿಳೆಯನ್ನು ಎತ್ತಿ ಎಸೆದ ಸ್ವಯಂಸೇವಕ!

08:48 PM Jul 13, 2023 | Team Udayavani |

ಗ್ರೇಟರ್ ನೋಯ್ಡಾ: ಸ್ವಯಂ ಘೋಷಿತ ದೇವಮಾನವ ಬಾಗೇಶ್ವರ್ ಧಾಮ್ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಸ್ವಯಂಸೇವಕನೊಬ್ಬ ಮಹಿಳೆಯನ್ನು ಎತ್ತಿ ಎಸೆದಿದ್ದು, ಈ ವೇಳೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Advertisement

ಬುಧವಾರ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಸ್ವಯಂಸೇವಕನನ್ನು ನಿಂತು ನೋಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದ್ದು, ಧೀರೇಂದ್ರ ಶಾಸ್ತ್ರಿ ಕುಳಿತ ವೇದಿಕೆಯ ಎದುರು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಎತ್ತಿಕೊಂಡು ಹೋಗಿ ಬ್ಯಾರಿಕೇಡ್‌ನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಪ್ರೇಕ್ಷಕರತ್ತ ಎಸೆದ ಘಟನೆ ಕ್ಯಾಮರಾದಲ್ಲಿ ದಾಖಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಬ್ ಇನ್ಸ್‌ಪೆಕ್ಟರ್ ರಾಮಶಂಕರ್ ಅವರನ್ನು ಅಮಾನತು ಮಾಡಲಾಗಿದ್ದು, ಮಹಿಳೆಯನ್ನು ಎಸೆದಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next