Advertisement

ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆ: ನೆರವಿಗೆ ಮನವಿ

07:00 PM Oct 11, 2018 | |

ಉಡುಪಿ: ಸಂತೋಷನಗರದ ಬಾಡಿಗೆ ಮನೆಯಲ್ಲಿ ವಾಸವಿರುವ ಸಾವಿತ್ರಿ ಆರ್‌. ಭಟ್‌ ಅವರು ಆರು ತಿಂಗಳುಗಳಿಂದ ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದು ಈಗಾಗಲೇ ಬಯಾಪ್ಸಿ ಮತ್ತು ಮೇಜರ್‌ ಸರ್ಜರಿ ನಡೆದಿದೆ. ಇದಕ್ಕೆ ಎರಡು ಲಕ್ಷ ರೂ.ತಗಲಿದೆ. ಅನಂತರ ಕೆಮೊಥೆರಪಿ ಕೂಡ ನಡೆಸಲಾಗಿದ್ದು ಈಗಾಗಲೇ ಒಟ್ಟು 5 ಲ.ರೂ. ವೆಚ್ಚ ಮಾಡಿದ್ದಾರೆ. ಮುಂದೆ ರೇಡಿಯೇಷನ್‌ಗೆ 2 ಲ.ರೂ.ಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ನಾತಕೋತ್ತರ ಪದವೀಧರೆಯಾಗಿರುವ ಸಾವಿತ್ರಿ ಅವರು ಈಗ ಉದ್ಯೋಗ ಮಾಡುವ ಸ್ಥಿತಿಯಲ್ಲಿಯೂ ಇಲ್ಲದೇ ಹಣಕಾಸು ಹೊಂದಿಸಿಕೊಳ್ಳಲು ಆಗದೆ ಸಂಕಷ್ಟಕ್ಕೀಡಾಗಿದ್ದಾರೆ. 

Advertisement

ಸಹೃದಯರು ವಿಜಯಾಬ್ಯಾಂಕ್‌ ಮೈನ್‌ ಬ್ರಾಂಚ್‌, ಕೆ.ಎಂ ಮಾರ್ಗ ಉಡುಪಿ, ಖಾತೆ ಸಂಖ್ಯೆ 11970101100062 (IFSC CODE: VIJB0001211)  ಗೆ ಜಮೆ ಮಾಡಿ ಚಿಕಿತ್ಸೆಗೆ ನೆರವಾಗಬೇಕು ಎಂದು ಸಾವಿತ್ರಿ ಭಟ್‌ ಅವರು ಮನವಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next