Advertisement

ಕುವೈಟ್‌ನಲ್ಲಿ ತೊಂದರೆಗೆ ಸಿಲುಕಿದ್ದ ಮಹಿಳೆ ಸ್ವದೇಶಕ್ಕೆ

11:44 PM Sep 23, 2020 | mahesh |

ಉಡುಪಿ: ಕುವೈಟ್‌ನಿಂದ ಊರಿಗೆ ಹೊರಟಾಗ ತೊಂದರೆಗೊಳಗಾದ ಉಡುಪಿ ಜಿಲ್ಲೆಯವರಾದ ಗಿರಿಜಾ ಅವರು ಬುಧವಾರ ಬೆಂಗಳೂರಿಗೆ ಕುವೈಟ್‌ ಏರ್ವೇಸ್‌ನಲ್ಲಿ ಬಂದಿಳಿದರು.

Advertisement

ಗಿರಿಜಾ ಕುವೈಟ್‌ ವಿಮಾನ ನಿಲ್ದಾಣಕ್ಕೆ ಸೆ. 12ರಂದು ಬಂದಾಗ ಅಲ್ಲಿನ ಆಕೆಯ ಮಾಲಕ ಮಾಡಿದ ಅವಾಂತರದಿಂದಾಗಿ ಪೊಲೀಸರ ವಶವಾಗಿದ್ದರು. ಆತ ಗಿರಿಜಾ ನಾಪತ್ತೆಯಾಗಿದ್ದಾರೆಂದು ದೂರು ಕೊಟ್ಟಿದ್ದ.

ಈ ನಡುವೆ ಕರಾವಳಿ ಮೂಲದವರ ಸತತ ಪರಿಶ್ರಮದಿಂದ ಗಿರಿಜಾ ಕ್ಷೇಮವಾಗಿ ಮರಳು ವಂತಾಗಿದೆ. ಬಹ್ರೈನ್‌ ಉದ್ಯಮಿ ಕೆಂಜೂರು ಶಶಿಧರ ಶೆಟ್ಟಿ, ಕುವೈಟ್‌ ತುಳುಕೂಟದ ಮಾಜಿ ಅಧ್ಯಕ್ಷ ವಿಲ್ಸನ್‌ ಡಿ’ಸೋಜಾ ಕುವೈಟ್‌ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ| ಶೇಖರ ಶೆಟ್ಟಿ, ಕುವೈಟ್‌ ಕೇರಳ ಮುಸ್ಲಿಂ ಅಸೋಸಿಯೇಶನ್‌ ಕರ್ನಾಟಕ ಶಾಖೆಯ ಬಂಟ್ವಾಳದ ಅಬ್ದುಲ್‌ ಲತೀಫ್, ಕುವೈಟ್‌ನಲ್ಲಿ ರುವ ನೂತನ ರಾಯಭಾರಿ ಶಿಬಿ ಜಾರ್ಜ್‌, ಅನಿವಾಸಿ ಭಾರತೀಯ ವೇದಿಕೆ ಮಾಜಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅವರ ನೆರವಿನಿಂದ ಗಿರಿಜಾ ಅವರ ಸಮಸ್ಯೆಗಳು ಪರಿಹಾರವಾದವು ಎಂದು ಕುವೈಟ್‌ನಲ್ಲಿರುವ ಕಾಸರಗೋಡು ಮೋಹನ ದಾಸ ಕಾಮತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next