Advertisement

ಪತಿ ಸಾವಿನ ಸುದ್ದಿ ಕೇಳಿ ಮಗನೊಂದಿಗೆ ಪತ್ನಿ ನೇಣಿಗೆ ಶರಣು!

12:24 PM Apr 17, 2022 | Team Udayavani |

ಲಿಂಗಸುಗೂರು: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಐದು ತಿಂಗಳ ಮಗನೊಂದಿಗೆ ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.

Advertisement

ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾರಾಮ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿದು ಲಿಂಗಸುಗೂರು ಪಟ್ಟಣದಲ್ಲಿ ಗಂಗಾರಾಮ್ ಪತ್ನಿ ಶ್ರುತಿ (30) ತನ್ನ ಮಗ ಅಭಿರಾಮ್ ನಿಗೆ (ಐದು ತಿಂಗಳು) ನೇಣು ಹಾಕಿ ತಾನೂ ನೇಣಿಗೆ ಶರಣಾದ ಘಟನೆ ಬೆಳಗಿನ ಜಾವ ನಡೆದಿದೆ.

ಇದನ್ನೂ ಓದಿ:ಸಾರಾಯಿ ಖರೀದಿ ಹಣದಲ್ಲಿ ಚಿಲ್ಲರೆ ವಾಪಸ್ ಕೊಡದಿದ್ದಕ್ಕೆ ಬಿಯರ್ ಬಾಟಲಿಯಿಂದ ಹೊಡೆದು ಕೊಲೆ

ಸ್ಥಳಕ್ಕೆ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next