Advertisement

ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು, ಶವವನ್ನು ತುಂಡರಿಸಿ ನಾಶ ಮಾಡಿದ ಪತ್ನಿ!

10:14 AM Sep 21, 2021 | Team Udayavani |

ಪಾಟ್ನಾ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು ಆತನ ಶವವನ್ನು ರಾಸಾಯನಿಕ ಬಳಸಿ ವಿಲೇವಾರಿ ಮಾಡಲೆತ್ನಿಸಿದ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ. ರಾಸಾಯನಿಕ ಸ್ಪೋಟವಾಗಿ ಘಟನೆ ಬೆಳಕಿಗೆ ಬಂದಿದೆ.

Advertisement

ಮುಜಾಫರ್ ಪುರ್ ನ ಸಿಕಂದರ್ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ರಾಕೇಶ್ ಎಂಬಾತನೇ ತನ್ನ ಪತ್ನಿ ರಾಧಾಳಿಂದ ಹತ್ಯೆಗೊಳಗಾದ ವ್ಯಕ್ತಿ. ರಾಕೇಶ್ ಪತ್ನಿ ರಾಧಾ, ಆಕೆಯ ಪ್ರಿಯಕರ ಸುಭಾಶ್, ರಾಧಾ ಸಹೋದರಿ ಕೃಷ್ಣಾ, ಮತ್ತು ಆಕೆಯ ಪತಿ ಆರೋಪಗಳು.

ಮೃತ ದೇಹವನ್ನು ಸುಭಾಷ್ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ. ಸುಭಾಷ್ ಮತ್ತು ರಾಧಾ ಬಾಡಿಗೆ ಫ್ಲಾಟ್ ಒಳಗೆ ಶವವನ್ನು ವಾಸನೆ ಬಾರದಂತೆ ತಡೆಯಲು ರಾಸಾಯನಿಕವನ್ನು ಬಳಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ರಾಸಾಯನಿಕ ಸ್ಫೋಟಕ್ಕೆ ಕಾರಣವಾಗಿದೆ, ಇದು ಸ್ಥಳೀಯ ನಿವಾಸಿಗಳಿಗೆ ತಿಳಿದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಫ್ಲಾಟ್ ಗೆ ಬಂದು ನೋಡಿದಾಗ ಶವದ ತುಂಡುಗಳನ್ನು ಚದುರಿದ್ದವು. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.

ಇದನ್ನೂ ಓದಿ:ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

Advertisement

ಮೃತ ರಾಕೇಶ್ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದ. ಹೀಗಾಗಿ ಆತನ ಮೇಲೆ ಪೊಲೀಸರ ಕಣ್ಣಿತ್ತು. ಹೀಗಾಗಿ ಅತ ಪತ್ನಿಯನ್ನು ಮನೆಯಲ್ಲಿಟ್ಟು ಬೇರೆ ಕಡೆ ರಹಸ್ಯವಾಗಿ ನೆಲೆಸಿದ್ದ. ಆತನ ಪಾರ್ಟ್ನರ್ ಸುಭಾಶ್, ರಾಧಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ರಾಧಾ ಮತ್ತು ಸುಭಾಶ್ ನಡುವೆ ಪ್ರೀತಿ ಬೆಳೆದಿತ್ತು. ಇದಕ್ಕೆ ರಾಧಾ ಸಹೋದರಿ ಮತ್ತು ಆಕೆಯ ಗಂಡನ ಸಹಕಾರವೂ ದೊರೆದಿತ್ತು. ತಮ್ಮ ದಾರಿಗೆ ಗಂಡ ರಾಕೇಶ್ ಅಡ್ಡಗಾಲಾಗುತ್ತಾನೆ ಎಂದು ಆತನ ಹತ್ಯೆಗೆ ಸಂಚು ರೂಪಿಸಿದ್ದರು ಇವರು!

ತೀಜ್ ಹಬ್ಬದ ಸಂದರ್ಭದಲ್ಲಿ ಗಂಡನನ್ನು ಮನೆಗೆ ಕರೆದ ರಾಧಾ, ಅಂದೇ ಪ್ರಿಯಕರ ಸುಭಾಶ್ ಜೊತೆ ಸೇರಿ ಆತನ ಹತ್ಯೆ ಮಾಡಿದ್ದಳು. ನಂತರ ರಾಕೇಶ್ ಶವವನ್ನು ತುಂಡರಿಸಿ ಅದಕ್ಕೆ ಕೆಮಿಕಲ್ ಹಾಕಿ ನಾಶ ಮಾಡಲು ಯತ್ನಿಸಿದ್ದರು. ಈ ವೇಳೆ ಸ್ಪೋಟವಾಗಿ ವಿಚಾರ ಬಹಿರಂಗವಾಗಿದೆ.

ರಾಕೇಶ್ ಸಹೋದರ ದಿನೇಶ್ ಈ ಬಗ್ಗೆ ದೂರು ನೀಡಿದ್ದು, ರಾಧಾ, ಆಕೆಯ ಪ್ರೇಮಿ ಸುಭಾಷ್, ಸಹೋದರಿ ಕೃಷ್ಣ ಮತ್ತು ಕೃಷ್ಣ ಅವರ ಪತಿ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಸಹೋದರ ಪತ್ನಿ ರಾಧಾ ಸುಭಾಷ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ದಿನೇಶ್ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next