Advertisement

Moodabidri ಬಸ್ಸಿನಿಂದ ಬಿದ್ದು ಮಹಿಳೆ ಸಾವು

12:51 AM Sep 13, 2023 | Team Udayavani |

ಮೂಡುಬಿದಿರೆ: ಆಸ್ಪತ್ರೆಗೆ ಹೋಗಲೆಗೆಂದು ಬಸ್‌ ಏರಿದ ಇಳಿವಯಸ್ಸಿನ ಮಹಿಳೆಯೋರ್ವರು ಚಾಲಕ ಮತ್ತು ನಿರ್ವಾಹಕರ ನಿರ್ಲಕ್ಷ್ಯದಿಂದಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಮೃತಪಟ್ಟ ಘಟನೆ ಪುರಸಭೆ ವ್ಯಾಪ್ತಿಯ ಮಾರೂರಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

Advertisement

ಮಾರೂರು ಕುಂಟೋಡಿ ನಿವಾಸಿ ನೀಲಮ್ಮ (66) ಮೃತಪಟ್ಟವರು. ಅವರು ಆರೋಗ್ಯ ತಪಾಸಣೆಗೆಂದು ಮೊಮ್ಮಗನ ಜತೆ ಆಸ್ಪತ್ರೆಗೆ ಹೊರಟಿದ್ದರು. ಬಸ್‌ ಏರುವಷ್ಟರಲ್ಲಿ ನಿರ್ವಾಹಕ ರೈಟ್‌ ಕೊಟ್ಟಿದ್ದು ಚಾಲಕ ಬಸ್‌ ಚಲಾಯಿಸಿದ್ದರಿಂದ ನೀಲಮ್ಮ ಆಯತಪ್ಪಿ ಬಿದ್ದರು. ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಅಸುನೀಗಿದರೆಂದೂ ತಿಳಿದುಬಂದಿದೆ. ನಿರ್ವಾಹಕ ಅಶೋಕ್‌ ಮತ್ತು ಚಾಲಕ ಪ್ರಸನ್ನ ಅವರನ್ನು ವಶಕ್ಕೆ ಪಡೆದುಕೊಂಡ ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ಸಂದೇಶ್‌ ಅವರು ಪ್ರಕರಣ ದಾಖಲಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next