Advertisement

ಟೂತ್‌ಪೇಸ್ಟ್‌ ಎಂದುಕೊಂಡು ಇಲಿಪಾಷಾಣದಲ್ಲಿ ಹಲ್ಲುಜ್ಜಿದ ವಿದ್ಯಾರ್ಥಿನಿ ಸಾವು

10:46 AM Feb 22, 2022 | Team Udayavani |

ಸುಳ್ಯ, ಫೆ. 21: ವಾರದ ಹಿಂದೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫ‌ಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಫೆ. 20ರಂದು ಸಂಭವಿಸಿದೆ. ಮರ್ಕಂಜ ಗ್ರಾಮದ ಬೇರಿಕೆ ರಮೇಶ ಅವರ ಪುತ್ರಿ ಶ್ರಾವ್ಯಾ (17) ಮೃತ ವಿದ್ಯಾರ್ಥಿನಿ.

Advertisement

ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಕೇಸ್ ಯಾಕಿಲ್ಲ: ಸರ್ಕಾರ ಮತ್ತು ಪೋಲಿಸರ ವಿರುದ್ದ ಡಿಕೆ ಶಿವಕುಮಾರ್ ಗರಂ

ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯಾ ವಾರದ ಹಿಂದೆ ಮನೆಯಲ್ಲಿ ಹಲ್ಲುಜ್ಜುವ ಟೂತ್‌ಪೇಸ್ಟ್‌ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದಳು. ಪರಿಣಾಮ ದೇಹದೊಳಗೆ ವಿಷ ಸೇರಿ ಆಕೆ ಅಸ್ವಸ್ಥಗೊಂಡಿದ್ದಳು.

ತತ್‌ಕ್ಷಣ ವಿಷಯ ತಿಳಿದ ಮನೆ ಮಂದಿ ಆಕೆ ಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫ‌ಲಿಸದೆ ಆಕೆ ಮೃತಪಟ್ಟಿದ್ದಾಳೆ. ಆಕೆ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ. ಮೃತರ ತಂದೆ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌-ಬೈಕ್‌ ಢಿಕ್ಕಿ:ವಿದ್ಯಾರ್ಥಿ ಸಾವು
ಮಂಗಳೂರು, ಫೆ.21: ಶಕ್ತಿನಗರ ಪದವಿನಲ್ಲಿ ಸೋಮವಾರ ಬೈಕ್‌ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ, ಶಕ್ತಿನಗರ ರುದ್ರಭೂಮಿ ಸಮೀಪದ ನಿವಾಸಿ, ನಗರದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಪ್ರಜ್ವಲ್‌ ಸಾಲ್ಯಾನ್‌ (18) ಮೃತಪಟ್ಟಿದ್ದಾರೆ. ಢಿಕ್ಕಿಯಾದ ಬಳಿಕ ಬಸ್‌ ಪ್ರಜ್ವಲ್‌ ಅವರ ಮೇಲಿಂದ ಹಾದು ಹೋಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next