Advertisement

ತೋಳ ಕೊಂದು ಬೈಕ್‌ಗೆ ಕಟ್ಟಿ ಎಳೆದೊಯ್ದ ಯುವಕರು

07:01 PM Oct 18, 2021 | Team Udayavani |

ಲಕ್ಷ್ಮೇಶ್ವರ : ಸೋಗಿವಾಳ ಗ್ರಾಮದಲ್ಲಿ ಮೂವರು ಯುವಕರ ಮೇಲೆ ತೋಳವೊಂದು ದಾಳಿ ಮಾಡಿದೆ. ಇದರಿಂದ ಆಕ್ರೋಶಗೊಂಡ ಯುವಕರು ತೋಳ ಹೊಡೆದು ಸಾಯಿಸಿ ದ್ವಿಚಕ್ರ ವಾಹನದ ಹಿಂದೆ ಕಟ್ಟಿ ಎಳೆದೊಯ್ಯುತ್ತಿರುವ ಅಮಾನವೀಯ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.

Advertisement

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅ ಧಿಕಾರಿಗಳು ಯುವಕರ ಪತ್ತೆಗೆ ಜಾಲ ಬೀಸಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಘಟನೆಯ ವಿವರ: ಸೋಗಿವಾಳ ಗ್ರಾಮದಲ್ಲಿ ಅ.13 ಮತ್ತು 14 ರಂದು ತೋಳವೊಂದು ಗ್ರಾಮಕ್ಕೆ ನುಗ್ಗಿ ಕೆಲವರ ಮೇಲೆ ದಾಳಿ ಮಾಡಿದೆ. ಇದರಿಂದ ರೊಚ್ಚಿಗೆದ್ದ ಕೆಲ ಯುವಕರು ತೋಳವನ್ನು ಕೊಂದು ಅದನ್ನು ದ್ವಿಚಕ್ರ ವಾಹನದ ಹಿಂದೆ ಕಟ್ಟಿ ಎಳೆದೊಯ್ದು ಬೀಸಾಕಿದ್ದಾರೆ. ಅಲ್ಲದೇ, ಈ ದೃಶ್ಯವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

ತೋಳದ ದಾಳಿಗೆ ಗಾಯಗೊಂಡ ಶಿವಾನಂದ ಅತ್ತಿಗೇರಿ ಎಂಬ ಯುವಕ ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತ ಚಿಕಿತ್ಸೆಯಿಂದ ಚೇತರಿಸಿಕೊಂಡು ಗ್ರಾಮಕ್ಕೆ ತೆರಳಿದ್ದಾನೆ. ವಿಡಿಯೋದಲ್ಲಿನ ಬೈಕ್‌ ಹಿಂದಿನ ನಂಬರ್‌ ಪರೀಕ್ಷಿಸಿದ ಅರಣ್ಯ ಇಲಾಖೆ ಅ ಧಿಕಾರಿಗಳು ಬೈಕ್‌ ಮಾಲಿಕ ಶಿವರಾಜಕುಮಾರ ಕುರುಬರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬೈಕ್‌ ಮಾಲಿಕ ನಾಪತ್ತೆಯಾಗಿದ್ದಾನೆ. ತೋಳಕ್ಕೆ ಹುಚ್ಚು ಹಿಡಿದಿತ್ತೆನ್ನಲಾಗಿದ್ದು, ಸತ್ತಿರುವ ತೋಳದ ಕಳೆಬರಹಕ್ಕಾಗಿ ಅರಣ್ಯ ಸಿಬ್ಬಂದಿ ತಲಾಷ್‌ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next