Advertisement

ಶ್ರದ್ಧೆ ಇಲ್ಲದ ಭಕ್ತಿ ವ್ಯರ್ಥ: ಕಾಳಹಸ್ತೇಂದ್ರ  ಸರಸ್ವತೀ ಸ್ವಾಮೀಜಿ

04:30 PM Mar 15, 2017 | Team Udayavani |

ಕಾರ್ಕಳ: ಭಕ್ತಿ, ಶ್ರದ್ಧೆ ಇಲ್ಲದ ಭಕ್ತಿ ವ್ಯರ್ಥ. ಭಗವಂತನ ಅನುಗ್ರಹಕ್ಕೆ ಭಕ್ತಿ  ಮತ್ತು ಶ್ರದ್ಧೆ ಮುಖ್ಯ ಎಂದು ಕಟಪಾಡಿ ಶ್ರೀಮತ್‌ ಜಗದ್ಗುರು  ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠದ ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರು ಹೇಳಿದ್ದಾರೆ.

Advertisement

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ  ಮಾ. 12ರಂದು ಜರಗಿದ  ನೂತನ ಸಭಾಭವನ ಅರ್ಕಶಾಲಿ ಶ್ರೀ ಭುಜಂಗಾಚಾರ್ಯ ವೇದಿಕೆಯನ್ನು  ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ದೇವಸ್ಥಾನ ಭಗವಂತನ ಚೈತನ್ಯ ಅಭಿವ್ಯಕ್ತಗೊಳ್ಳುವ ಸ್ಥಳ. ಭಗವಂತ ಸರ್ವಾಂತರ್ಯಾಮಿ,  ಭಗವಂತನನ್ನು ದೇವಸ್ಥಾನದಲ್ಲೇ ಯಾಕೆ ಪೂಜಿಸಬೇಕೆನ್ನುವ ಭಾವನೆ ನಮ್ಮಲ್ಲಿದೆ. ಆದರೆ ಭಗವಂತ ಎಲ್ಲಾ ಕಡೆ ಇದ್ದರೂ ಭಗವಂತನ ಚೈತನ್ಯ ಅತ್ಯಂತ ಪರಿಣಾಮಕಾರಿಯಾಗಿ ಪ್ರಕಟ ಗೊಳ್ಳುವುದು ದೇವಸ್ಥಾನದಲ್ಲಿಯೇ ಎಂದವರು ಹೇಳಿದರು.

ಕ್ಷೇತ್ರದ ಪ್ರಧಾನ ಅರ್ಚಕ  ಉಮೇಶ್‌ ತಂತ್ರಿ ಮಂಗಳೂರು,  ವಿಶ್ವಕರ್ಮ ಸಂಘ ಮುಂಬಯಿ ಇದರ ಅಧ್ಯಕ್ಷ ಸದಾನಂದ ಆಚಾರ್ಯ ನೂತನ ವೇದಿಕೆಯನ್ನು ನಿರ್ಮಿಸಿಕೊಟ್ಟ ವಿಟuಲ ಆಚಾರ್ಯ ದಂಪತಿ, ಆಡಳಿತ ಮೊಕ್ತೇಸರ ಕೆ. ಹರೀಶ್‌ ಆಚಾರ್ಯ, ಜೊತೆ ಮೊಕ್ತೇಸರ ಕೆ. ರತ್ನಾಕರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ,  ಗೌರವಾಧ್ಯಕ್ಷ ಕೆ. ಸುಧಾಕರ ಆಚಾರ್ಯ ಹಾಗೂ ಕೂಡುವಳಿಕೆ ಮೊಕ್ತೇಸರರು  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ನೂತನ ವೇದಿಕೆಯನ್ನು  ನಿರ್ಮಿಸಿಕೊಟ್ಟ ವಿಟuಲ ಆಚಾರ್ಯ ದಂಪತಿಯನ್ನು  ಹಾಗೂ ಕೂಡುವಳಿ ಮೊಕ್ತೇಸರರನ್ನು  ಸಮ್ಮಾನಿಸಿ ಅಭಿನಂದಿಸಲಾಯಿತು.ಉಪನ್ಯಾಸಕ ವಸಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.  ಮೊಕ್ತೇಸರ ಕೆ. ಹರೀಶ್‌ ಆಚಾರ್ಯ ಸ್ವಾಗತಿಸಿ,  ಜತೆ ಮೊಕ್ತೇಸರ ಕೆ. ರತ್ನಾಕರ ಆಚಾರ್ಯ  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next