Advertisement

Chandigarh:48 ಗಂಟೆಯಲ್ಲೇ ಅರ್ಜುನ ಪ್ರಶಸ್ತಿ ಪುರಸ್ಕೃತ ದಲ್ಬೀರ್‌ ಹತ್ಯೆ ಭೇದಿಸಿದ ಖಾಕಿಪಡೆ

09:58 PM Jan 04, 2024 | Team Udayavani |

ಚಂಡೀಗಢ: ಇತ್ತೀಚೆಗಷ್ಟೇ ಪಂಜಾಬ್‌ನ ಜಲಂಧರ್‌ನಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ, ಪೊಲೀಸ್‌ ಅಧಿಕಾರಿ ದಲ್ಬಿರ್‌ ಸಿಂಗ್‌ ಅವರ  ಶವ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸಿಂಗ್‌ ಅವರನ್ನು ಹತ್ಯೆಗೈದಿದ್ದಾನೆಂಬ ಆರೋಪದ ಮೇರೆಗೆ ರಿಕ್ಷಾ ಚಾಲಕನೊಬ್ಬನನ್ನು ಬಂಧಿಸಿದ್ದಾರೆ.

Advertisement

ರಸ್ತೆ ಬದಿಯ ಕಾಲುವೆಯಲ್ಲಿ ಸಿಂಗ್‌ ಅವರ ಶವ ಪತ್ತೆಯಾದ 48 ಗಂಟೆಗಳ ಒಳಗೆ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಹೊಸ ವರ್ಷದ ಹಿಂದಿನ ದಿನ ರಾತ್ರಿ ತಮ್ಮ ಹಳ್ಳಿಗೆ ತೆರಳಲೆಂದು ಸಿಂಗ್‌ ಆಟೋ ಹತ್ತಿದ್ದರು ಆದರೆ, ಹಳ್ಳಿಯವರೆಗೆ ಡ್ರಾಪ್‌ ಮಾಡಲು ಚಾಲಕ ಒಪ್ಪದೇ ಇದ್ದಾಗ ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ. ಈ ವೇಳೆ  ರಿಕ್ಷಾ ಚಾಲಕ ವಿಜಯ್‌ ಕುಮಾರ್‌ ಸಿಟ್ಟಿಗೆದ್ದು ಸಿಂಗ್‌ ಅವರ ಪಿಸ್ತೂಲನ್ನೇ ಕಸಿದು, ಅವರನ್ನೇ ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next