Advertisement

Belthangady ಮಗ ಆತ್ಮಹತ್ಯೆಗೈದ 12 ದಿನಗಳಲ್ಲಿ ತಂದೆಯೂ ನೇಣಿಗೆ ಶರಣು

01:18 AM Jan 17, 2024 | Team Udayavani |

ಬೆಳ್ತಂಗಡಿ: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಪೆರ್ಲದಲ್ಲಿ ಜ. 16ರಂದು ನಡೆದಿದೆ.

Advertisement

ಇಲ್ಲಿನ ಪೆರ್ಲ ನಿವಾಸಿ ಯೋಗೀಶ್‌ ಪೂಜಾರಿ ಅವರ ಮಗ ಯಕ್ಷಿತ್‌ (14) ಜ. 4ರಂದು ಮನನೊಂದು ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಜ.14ರಂದು ಯಕ್ಷಿತ್‌ ಉತ್ತರಕ್ರಿಯೆ ನಡೆದಿತ್ತು. ಇದರ ಬೆನ್ನಲ್ಲೆ ಜ.16ರಂದು ಮನೆಯಲ್ಲಿಯೇ ತಂದೆ ಯೋಗೀಶ್‌ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗನ ಆತ್ಮಹತ್ಯೆಯಿಂದ ನೊಂದು ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next