Advertisement

ದುಡ್ಡಿಲ್ಲದೆ ಸ್ಥಳೀಯ ಚುನಾವಣೆ ಮುಂದೂಡಿದ ಶ್ರೀಲಂಕಾ

08:06 AM Feb 22, 2023 | Team Udayavani |

ಕೊಲೊಂಬೊ : ಚುನಾವಣೆಗೆ ಬೇಕಿರುವ ಬ್ಯಾಲೆಟ್‌ ಪೇಪರ್‌ ಮುದ್ರಿಸಲು ಹಣವಿಲ್ಲದ ಕಾರಣ, ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾ ಮುಂದಿನ ತಿಂಗಳು ನಡೆಯಬೇಕಿದ್ದ ಸ್ಥಳೀಯ ಚುನಾವಣೆಯನ್ನೇ ಮುಂದೂಡಿದೆ. ಈ ಕುರಿತು ಲಂಕಾ ಸುಪ್ರೀಂಕೋರ್ಟ್‌ಗೆ ಚುನಾವಣೆ ಆಯೋಗ ಮಾಹಿತಿ ನೀಡಿದೆ.

Advertisement

ಬ್ಯಾಲೆಟ್‌ ಪೇಪರ್‌ ಮುದ್ರಣ, ಇಂಧನ ಹಾಗೂ ಭದ್ರತಾ ವ್ಯವಸ್ಥೆಗೆ ಬೇಕಿರುವ ಹಣವನ್ನು ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ವಿತ್ತ ಇಲಾಖೆ ತಿಳಿಸಿದೆ.

ಈ ಹಿನ್ನೆಲೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದಿದೆ. ಕಳೆದ ವರ್ಷ ರಾಷ್ಟ್ರದ ಆರ್ಥಿಕ ದಿವಾಳಿತನದ ವಿರುದ್ಧ ಜನರು ನಡೆಸಿದ ಭಾರೀ ಪ್ರತಿಭಟನೆಗಳ ಬಳಿಕ ರಾನಿಲ್‌ ವಿಕ್ರಮಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾ.9ರಂದು ನಡೆಯಬೇಕಿದ್ದ ಚುನಾವಣೆ ಅವರಿಗೆ ಬೆಂಬಲ ನೀಡುವಲ್ಲಿ ಮಹತ್ವ ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next