Advertisement

ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

10:55 PM Sep 23, 2019 | mahesh |

ನವದೆಹಲಿ: ಸುಪ್ರೀಂಕೋರ್ಟ್‌ಗೆ ನೂತನವಾಗಿ ನೇಮಕ  ಗೊಂಡ ನಾಲ್ವರು ನ್ಯಾಯಮೂರ್ತಿಗಳು ಸೋಮವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಇದರಿಂದಾಗಿ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಹೊಸ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

Advertisement

ನ್ಯಾ. ಕೃಷ್ಣ ಮುರಾರಿ, ನ್ಯಾ.ಎಸ್‌.ರವೀಂದ್ರ ಭಟ್‌, ನ್ಯಾ.ವಿ.ರಾಮಸುಬ್ರಮಣ್ಯನ್‌, ನ್ಯಾ.ಹೃಷಿಕೇಶ್‌ ರಾಯ್‌ ಪ್ರಮಾಣ ಸ್ವೀಕರಿಸಿದವರು. ನ್ಯಾ.ಮುರಾರಿ ಮತ್ತು ನ್ಯಾ.ಭಟ್‌ ಕ್ರಮವಾಗಿ ಪಂಜಾಬ್‌ ಮತ್ತು ಹರ್ಯಾಣ, ರಾಜಸ್ಥಾನ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಗಳಾಗಿದ್ದವರು. ನ್ಯಾ.ರಾಮಸುಬ್ರಮಣಿಯನ್‌, ನ್ಯಾ.ರಾಯ್‌ ಕ್ರಮವಾಗಿ ಹಿಮಾಚಲ ಪ್ರದೇಶ ಮತ್ತು ಕೇರಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವರು ಜು.11 ರಂದು ಕಾನೂನು ಸಚಿವಾಲಯ ರಾಜ್ಯ ಸಭೆಗೆ ಉತ್ತರ ನೀಡಿದ ಪ್ರಕಾರ 59,331 ಪ್ರಕ ರಣಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next