Advertisement

ಹಾಲಿ ಸಂಸತ್‌ ಭವನದಲ್ಲಿ ಕೊನೇ ಅಧಿವೇಶನ? ಚಳಿಗಾಲದ ಅಧಿವೇಶನ ಹೊಸ ಸಂಸತ್‌ ಭವನದಲ್ಲಿ ಸಾಧ್ಯತೆ

12:04 AM Aug 10, 2022 | Team Udayavani |

ಹೊಸದಿಲ್ಲಿ: ಹಾಲಿ ಇರುವ ಸಂಸತ್‌ ಭವನದಲ್ಲಿ ಇನ್ನು ಅಧಿವೇಶನ ನಡೆಯಲಾರದೇ? ಹೀಗೊಂದು ಜಿಜ್ಞಾಸೆ ವ್ಯಕ್ತವಾಗತೊಡಗಿದೆ.

Advertisement

ಹೀಗಾಗಿ, 1927ರಲ್ಲಿ ನಿರ್ಮಾಣಗೊಂಡ ಈಗಿನ ಸಂಸತ್‌ ಭವನ ದೇಶದ ಪ್ರಜಾಪ್ರಭುತ್ವದ ಭವ್ಯ ಇತಿಹಾಸಕ್ಕೆ ಸಾಕ್ಷ್ಯವಾಗುವ ಸಾಧ್ಯತೆ ಇದೆ. ಕೇಂದ್ರವೇ ಹಿಂದಿನ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಂತೆ ಚಳಿಗಾಲದ ಅಧಿವೇಶನವನ್ನು ಹೊಸ ಸಂಸತ್‌ ಭವನದಲ್ಲಿ ನಡೆಸಲಾಗುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಇದೊಂದು ಅರ್ಥಪೂರ್ಣ ನಿರ್ಧಾರವಾಗಲಿದೆ ಎಂದು ಕೇಂದ್ರ ಹೇಳಿಕೊಂಡಿದೆ. 2020ರ ಡಿಸೆಂಬರ್‌ನಲ್ಲಿ ಹೊಸ ಸಂಸತ್‌ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರು.

ಕೋರಿಕೆ ಹಿನ್ನೆಲೆಯಲ್ಲಿ: ವಿಪಕ್ಷಗಳ, ಆಡಳಿತ ಪಕ್ಷಗಳ ಕೋರಿಕೆ ಹಿನ್ನೆಲೆ ಅಧಿವೇಶನವನ್ನು 2 ದಿನ ಮೊದಲೇ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

ವಿಪಕ್ಷಗಳು ಹೇಳಿರುವಂತೆ 4 ಅಲ್ಲ ಎರಡು ದಿನ ಮೊದಲು ಮುಂದೂಡಿಕೆ ಮಾಡಲಾಗಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ವ್ಯರ್ಥ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.

Advertisement

ಅತೃಪ್ತಿ: 4 ದಿನ ಮೊದಲೇ ಅಧಿವೇಶನ ಮುಕ್ತಾಯ ಗೊಳಿಸಿದ್ದಕ್ಕೆ ಕಾಂಗ್ರೆಸ್‌ ಅತೃಪ್ತಿ ವ್ಯಕ್ತಪಡಿಸಿದೆ. ವಿಪಕ್ಷಗಳು ಎಲ್ಲಾ ವಿಚಾರಗಳ ಬಗ್ಗೆ ಆಮೂಲಾಗ್ರವಾಗಿ ಚರ್ಚಿಸಲು ಸಿದ್ಧವಿದ್ದರೂ, ಕೇಂದ್ರ ಮಾತ್ರ ನಿರಾಸಕ್ತಿ ವಹಿಸಿತ್ತು ಎಂದು ರಾಜ್ಯಸಭೆ ಸಂಸದ ಜೈರಾಮ್‌ ರಮೇಶ್‌ ದೂರಿದ್ದಾರೆ. ಪ್ರಧಾನಿ ಮತ್ತು ಸಂಪುಟ ಸಚಿವರು ಸಂಸತ್‌ಅನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next