Advertisement
ಸಭಾಪತಿ ಸ್ಥಾನದಲ್ಲಿ ಕೆ.ಪ್ರತಾಪ್ಚಂದ್ರ ಶೆಟ್ಟಿಯವರಿದ್ದರೆ, ಪರಿಷತ್ತಿನ ಸಭಾನಾಯಕಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಹಾಗೂ ಪ್ರತಿಪಕ್ಷದ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಸೇವೆ ಸಲ್ಲಿಸುತ್ತಿದ್ದಾರೆ. ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಯವರಿಂದ ತೆರವಾದ ಸ್ಥಾನಕ್ಕೆ ಕುಂದಾಪುರ ತಾಲೂಕಿನ ಹುಯ್ನಾರು ಮನೆತನದ ಕೆ.ಪ್ರತಾಪ್ಚಂದ್ರ ಶೆಟ್ಟಿ ಅನಿರೀಕ್ಷಿತ ಆಯ್ಕೆಯಾಗಿದ್ದಾರೆ.
Related Articles
Advertisement
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಆರ್.ಸೀತಾರಾಂ ಅವರು ವಿಧಾನ ಪರಿಷತ್ನ ಸಭಾನಾಯಕರಾಗಿದ್ದರು. ಅವರ ಅವಧಿ ಮುಗಿದ ನಂತರ ಆ ಸ್ಥಾನ ಕೂಡ ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಡಾ.ಜಯಮಾಲಾ ಅವರ ಪಾಲಿಗೆ ಒದಗಿ ಬಂದಿದೆ. ಇವರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದು, ಸಚಿವೆಯಾಗಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಪರಿಷತ್ತಿನ ಮೂರು ಆಯಕಟ್ಟಿನ ಹುದ್ದೆಗಳು ಕರಾವಳಿಯ ಧುರೀಣರಿಗೆ ಲಭಿಸಿರುವುದು ವಿಶೇಷವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಐವನ್ ಡಿಸೋಜಾ ಹಾಗೂ ಪ್ರತಿಪಕ್ಷದ ಗಣೇಶ್ ಕಾರ್ಣಿಕ್ ಇದ್ದರು.
– ರಾಜು ಖಾರ್ವಿ ಕೊಡೇರಿ