Advertisement

ಗಾಳಿ: ಲಾರಿ ಮೇಲೆ ಉರುಳಿದ ಮರ

07:48 AM Apr 04, 2018 | Team Udayavani |

ಬೆಳ್ತಂಗಡಿ: ಮಂಗಳವಾರ ಸಂಜೆ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಳೆ ಸುರಿದಿದ್ದು, ಉಜಿರೆಯ ನೀರಚಿಲುಮೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮಿನಿ ಲಾರಿಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಸ್ವಲ್ಪ ಸಮಯ ಉಜಿರೆ – ಧರ್ಮಸ್ಥಳ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

Advertisement

ಹಲವು ವಿದ್ಯುತ್‌ ಕಂಬಗಳಿಗೂ ಹಾನಿಯುಂಟಾಗಿದೆ. ಕನ್ಯಾಡಿ-2 ಶಾಲೆ ಬಳಿ ವಿದ್ಯುತ್‌ ತಂತಿಗಳ ಮೇಲೆ ಮರಬಿದ್ದು ಹಾನಿಯುಂಟಾಗಿದೆ.

ಗುಡುಗು ಸಿಡಿಲು ಗಾಳಿ ಸಹಿತ ಮಳೆ ಸುರಿದಿದ್ದರಿಂದ ಮುಂಡಾಜೆ, ಕಲ್ಮಂಜ, ಮುಲಾರು ಮೊದಲಾದೆಡೆ 500ಕ್ಕೂ ಹೆಚ್ಚು ಅಡಿಕೆ ಮರ, ರಬ್ಬರ್‌ ಮರಗಳಿಗೆ ಹಾನಿಯಾಗಿದೆ. ಪರಾರಿ ಸಿದ್ದಬೈಲು ಮಾರ್ಗದ ಪಿಲತಡ್ಕ ಬಳಿ 5 ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಉಜಿರೆ, ಕನ್ಯಾಡಿ ಮೊದಲಾದೆಡೆ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಮಂಗಳವಾರ ಸಂಜೆಯಿಂದಲೇ ನಗರ ಸಹಿತ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿ ಕತ್ತಲು ಆವರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next