Advertisement

ಕಾಪು ತಾಲೂಕಿನಾದ್ಯಂತ ಗಾಳಿ, ಮಳೆಯಿಂದ ಹಾನಿ

09:05 PM Apr 24, 2019 | Team Udayavani |

ಕಾಪು: ಕಾಪು ತಾಲೂಕಿನಾದ್ಯಂತ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ – ಮಳೆಗೆ ವಿವಿಧೆಡೆ ಹಾನಿಯಾಗಿದೆ.

Advertisement

ಕಾಪು, ಮೂಳೂರು, ಉಚ್ಚಿಲ, ಕಟಪಾಡಿ ಮೊದಲಾದೆಡೆ ಅಂಗಡಿಗಳ ಕಬ್ಬಿಣದ ಶೀಟುಗಳು ಹಾರಿ ಹೋಗಿದ್ದು, ಬೋರ್ಡ್‌ಗಳು ಧರಾಶಾಯಿಯಾಗಿದೆ. ಹೆದ್ದಾರಿ, ಒಳರಸ್ತೆಗಳ ಬದಿಯಲ್ಲಿರುವ ಮರಗಳ ಗೆಲ್ಲು, ತೆಂಗಿನ ಮರಗಳ ಸೋಗೆ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಕೆಲ ಕಾಲ ತಡೆಯುಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲ ಮಳೆಗೇ ಅಸಮರ್ಪಕ ಕಾಮಗಾರಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ನೀರು ಶೇಖರಣೆಗೊಂಡಿತ್ತು.
ಮೂಡುಬೆಳ್ಳೆ ಕಪ್ಪಂದಕರಿಯದ ಬಳಿ ಮರ ಬಿದ್ದು ಮೂರ್‍ನಾಲ್ಕು ವಿದ್ಯುತ್‌ ಕಂಬ, ಮೂಡುಬೆಳ್ಳೆ ಗೀತಾ ಮಂದಿರದ ಬಳಿ ತಂತಿ ಮೇಲೆ ಮರ ಬಿದ್ದು ವಿದ್ಯುತ್‌ ಸ್ಥಗಿತಗೊಂಡಿತ್ತು.

ಮೂಡುಬೆಳ್ಳೆ ಲಯನ್ಸ್‌ ಕ್ಲಬ್‌ ಕಟ್ಟಡದ ಸಿಮೆಂಟ್‌ ಶೀಟ್‌ಗೆ ಹಾನಿ ಉಂಟಾಗಿದೆ. ಕೇನೆ ಕುಂಜ ಸತೀಶ್‌ ನಾಯ್ಕ ಎಂಬವರ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next