Advertisement

ಎತ್ತಿನಹೊಳೆ ಹೋರಾಟ ಸಮಿತಿಗೆ ಹಿನ್ನಡೆ; ಹಸಿರು ನ್ಯಾಯಪೀಠ ಹೇಳಿದ್ದೇನು?

01:27 PM Feb 06, 2017 | Team Udayavani |

ಚೆನ್ನೈ: ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಚೆನ್ನೈನ ಹಸಿರು ನ್ಯಾಯಾಧಿಕರಣ ಪೀಠ, ಎತ್ತಿನಹೊಳೆ ನೀರಾವರಿ ಹೋರಾಟದ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಎತ್ತಿನಹೊಳೆ ನೀರಾವರಿ ಯೋಜನೆ ಬಗ್ಗೆ ಪರಿಸರ ಮೌಲ್ಯಮಾಪನದ ವರದಿ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಎನ್ ಜಿಟಿಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಧಿಕರಣ ಪೀಠದ ಮುಖ್ಯಸ್ಥರಾದ ನ್ಯಾ. ಸ್ವತಂತ್ರಕುಮಾರ್ ಅವರು,ಕುಡಿಯುವ ನೀರಿನ ಯೋಜನೆಗೆ ಮೌಲ್ಯಮಾಪನ ಬೇಕಿಲ್ಲ ಎಂದು ಕೇಂದ್ರ ಪ್ರಮಾಣಪತ್ರ ಸಲ್ಲಿಸಿದೆ. ಅಗತ್ಯವಿದ್ದರೆ ಪರಿಸರ ಹೋರಾಟಗಾರರು ಸುಪ್ರೀಂಕೋರ್ಟ್ ಗೆ ಹೋಗಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಎತ್ತಿನಹೊಳೆ ನೀರಾವರಿ ಯೋಜನೆ ಕುರಿತಂತೆ ಅಂತಿಮ ವಿಚಾರಣೆ ಮುಗಿದಿದೆ. ಕೇಂದ್ರ ಕೂಡಾ ಪ್ರಮಾಣಪತ್ರ ಸಲ್ಲಿಸಿದೆ. ಹಾಗಾಗಿ ಮಂಗಳವಾರ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವುದಾಗಿ ನ್ಯಾ.ಸ್ವತಂತ್ರಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next