Advertisement

ಕರ್ನಾಟಕವನ್ನು ಉಡ್ತಾ ಪಂಜಾಬ್‌ ಮಾಡಲು ಬಿಡುವುದಿಲ್ಲ : ಡಿಸಿಎಂ ಪರಂ

12:20 PM Jul 10, 2018 | |

 ಬೆಂಗಳೂರು: ಬೆಂಗಳೂರನ್ನಾಗಲಿ,ಕರ್ನಾಟಕವನ್ನಾಗಲಿ ‘ಉಡ್ತಾ ಪಂಜಾಬ್‌’ ಮಾಡಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಂಗಳವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ನ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ ಕರ್ನಾಟಕದಲ್ಲಿ ಯಾವುದೇ ಮಾದಕ ದೃವ್ಯಗಳ ಜಾಲ ಬೆಳೆಯಲು ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ  ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಿದೆ. ನಮ್ಮ ಸಮ್ಮಿಶ್ರ ಸರ್ಕಾರ ಬಂದ ಬಳಿಕ 56 ಪ್ರಕರಣಗಳನ್ನು ಬಯಲಿಗೆಳೆದಿದ್ದೇವೆ. 

ವಿದೇಶಕ್ಕೆ ಮಾತ್ರೆ ರೂಪದಲ್ಲಿ ಸಾಗಾಟ ಮಾಡಲು ಸಿದ್ದವಾಗಿರಿಸಿದ್ದ 5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next