Advertisement

ದೇವರಿಚ್ಛಿಸಿದ್ರೆ ಯೆಮೆನ್‌ಗೆ ಹೋಗಲು ಸಿದ್ಧ: ಪಾದ್ರಿ

06:15 AM Oct 02, 2017 | Team Udayavani |

ಕೊಚ್ಚಿ: “ದೇವರು ಇಚ್ಛಿಸಿದರೆ, ನಾನು ಮತ್ತೂಮ್ಮೆ ಯೆಮೆನ್‌ಗೆ ಹೋಗಲು ಸಿದ್ಧ.’ ಹೀಗೆಂದು ಹೇಳಿರುವುದು ಯೆಮೆನ್‌ನಲ್ಲಿ 18 ತಿಂಗಳುಗಳ ಕಾಲ ಐಸಿಸ್‌ ಉಗ್ರರ ಹಿಡಿತದಲ್ಲಿದ್ದು ಇತ್ತೀಚೆಗೆ ಬಿಡುಗಡೆಯಾದ ಬೆಂಗಳೂರಿನ ಪಾದ್ರಿ ಟಾಮ್‌ ಉಳುನ್ನಲಿಲ್‌. ರವಿವಾರ ಕೊಚ್ಚಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. 

Advertisement

ನನ್ನನ್ನು ಅಪಹರಿಸಿದ ಗುಂಪು ಐಸಿಸ್‌ ಹೌದೋ ಅಲ್ಲವೋ ಎನ್ನುವುದು ನನಗಂತೂ ಈಗಲೂ ಗೊತ್ತಿಲ್ಲ. ಆದರೆ, ಅವರು ನನಗೆ ಯಾವುದೇ ರೀತಿ ಹಿಂಸೆ ಕೊಡಲಿಲ್ಲ, ಶೂಟ್‌ ಮಾಡುತ್ತೇವೆಂದು ಬೆದರಿಸಲಿಲ್ಲ. ಬದಲಿಗೆ, ನನಗೆ ಸೂಕ್ತ ಸಮಯಕ್ಕೆ ಆಹಾರ, ಔಷಧಗಳನ್ನು ನೀಡುತ್ತಿದ್ದರು ಎಂದೂ ಹೇಳಿದ್ದಾರೆ ಫಾದರ್‌ ಟಾಮ್‌.

Advertisement

Udayavani is now on Telegram. Click here to join our channel and stay updated with the latest news.

Next