Advertisement

ಮುಷ್ಕರ ಹಿಂದೆಗೆತಕ್ಕೆ CMಗೆ ರಾಜಸ್ಥಾನ ಹೈಕೋರ್ಟ್‌ ವಕೀಲರ ಶರತ್ತು

04:23 PM Jun 18, 2018 | udayavani editorial |

ಜೋಧ್‌ಪುರ : ಉದಯಪುರದಲ್ಲಿ  ಹೈಕೋರ್ಟ್‌ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸಲು ಸಮಿತಿಯೊಂದನ್ನು ರೂಪಿಸುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ವಿಜಯರಾಜೇ ಸಿಂಧಿಯಾ ಅವರು ತಮಗೆ ಕೊಟ್ಟಲ್ಲಿ ತಾವು ತಮ್ಮ ಮುಷ್ಕರವನ್ನು ಹಿಂಪಡೆಯುವುದಾಗಿ ರಾಜಸ್ಥಾನ ಹೈಕೋರ್ಟ್‌ ವಕೀಲರು ಇಂದು ಹೇಳಿದ್ದಾರೆ.

Advertisement

ಉದಯಪುರದಲ್ಲಿ ಹೈಕೋರ್ಟಿನ Circuit ಪೀಠವನ್ನುಸ್ಥಾಪಿಸಬೇಕೆಂಬ ಉದಯಪುರ ವಕೀಲರ ಬೇಡಿಕೆಯನ್ನು ಪರಿಗಣಿಸಲು ರಾಜ್ಯ ಕಾನೂನು ಸಚಿವ ಪುಷ್ಪೇಂದ್ರ ಸಿಂಗ್‌ ರಾಣಾವತ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರೂಪಿಸುವಂತೆ ಮುಖ್ಯಮಂತ್ರಿ ರಾಜೆ ಅವರು ಅಧಿಕಾರಿಗಳಿಗೆ ಕಳೆದ ಮೇ 19ರಂದು ಸೂಚಿಸಿದ್ದರು.

ಇದನ್ನು ಪ್ರತಿಭಟಿಸಿ ಜೋಧ್‌ಪುರ ವಕೀಲರು ಕಳೆದ ಮೇ 21ರಿಂದ ಮುಷ್ಕರ ನಿರತರಾಗಿದ್ದಾರೆ. ಮೊನ್ನೆ ಶನಿವಾರ ಜೋಧ್‌ಪುರ ವಕೀಲರ ನಿಯೋಗದೊಂದಿಗೆ ಮಾತನಾಡುತ್ತಾ ಸಿಎಂ ರಾಜೇ ಅವರು ಈ ತನಕ ಯಾವುದೇ ಸಮಿತಿಯನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next