Advertisement

ಇನ್ನೂ 10-15 ವರ್ಷ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್ ಸ್ಪಷ್ಟನೆ

05:56 PM Apr 11, 2023 | Team Udayavani |

ಹುಬ್ಬಳ್ಳಿ: ನಾನು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇನ್ನು 10-15 ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಪಷ್ಟಪಡಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳವಾರ ಬೆಳಿಗ್ಗೆ ಪಕ್ಷದ ವರಿಷ್ಠರಿಂದ ದೂರವಾಣಿ ಬಂದದ್ದು ನಿಜ. ಹೊಸಬರಿಗೆ ಅವಕಾಶ ಮಾಡಿಕೊಡಲು ಒಪ್ಪುತ್ತೀರಾ ಎಂದು ಕೇಳಿದರು ಆದರೆ ನಾನು ಚುನಾವಣೆ ಪ್ರಚಾರ ಆರಂಭಿಸಿದ್ದೇನೆ, ಇದೊಂದು ಬಾರಿ ಅವಕಾಶ ನೀಡಿ ಎಂದಿದ್ದೇನೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ ಎಂದಿದ್ದಾರೆ.‌‌

ನನ್ನ ಬಗ್ಗೆ ಯಾವುದೇ ಕಪ್ಪುಚುಕ್ಕೆ, ಹಗರಣ ಇಲ್ಲ, ಆರು ಬಾರಿ ಗೆದ್ದಿದ್ದೇನೆ, ಏಳನೇ ಬಾರಿಗೆ ಹೆಚ್ಚಿನ ಮತಗಳಿಂದ ಗೆಲ್ಲುವುದು ಖಚಿತ. ಇಂತಹ ಸಂದರ್ಭದಲ್ಲಿ ವರಿಷ್ಠರ ಅನಿಸಿಕೆ ಮನಸ್ಸಿಗೆ ನೋವು ತರಿಸಿದೆ ಎಂದರು.

ಇದನ್ನೂ ಓದಿ:Muskmelon Fruit: ಕರ್ಬೂಜ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗವಿದೆ…

ಪಕ್ಷದ ವರಿಷ್ಠರ ಬಗ್ಗೆ ವಿಶ್ವಾಸವಿದೆ ನಾಳೆವರೆಗೂ ಕಾಯ್ದು ನೋಡುತ್ತೇನೆ. ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದರು.

Advertisement

ವ್ಯತಿರಿಕ್ತ ಪರಿಣಾಮ ಬಂದರೆ ಎಂಬ ಪ್ರಶ್ನೆಗೆ ಕಾಯ್ದು ನೋಡಿ, ನಾನಂತೂ ಕಣದಲ್ಲಿ ಇರುತ್ತೇನೆ. ನನ್ನ ಸ್ಪರ್ಧೆ ಬೇಡ ಎನ್ನುವುದಾದರೆ 2-3 ತಿಂಗಳು ಮೊದಲೆ ಹೇಳಿದ್ದರೆ ನನಗೂ ಗೌರವ ಇರುತ್ತಿತ್ತು. ನಾಮಪತ್ರ ಸಲ್ಲಿಸುವ ದಿನ ಹತ್ತಿರ ಇರುವಾಗ ಈ ರೀತಿ ಹೇಳಿದರೆ ಹೇಗೆ ಎಂದರು.

ಪಕ್ಷದ ವರಿಷ್ಠರ ಬಗ್ಗೆ ಪೂರ್ಣ ವಿಶ್ವಾಸವಿದೆ ಟಿಕೆಟ್ ವಿಶ್ವಾಸವಿದೆ. ಒಂದಂತೂ ಸ್ಪಷ್ಟ 10-15 ವರ್ಷ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next