Advertisement

Kerala; ಉಳಿಕ್ಕಲ್ ಪಟ್ಟಣಕ್ಕೆ ನುಗ್ಗಿ ಕಾಡಾನೆ ದಾಂಧಲೆ: ಮೂವರಿಗೆ ಗಾಯ

03:42 PM Oct 11, 2023 | Team Udayavani |

ಕಣ್ಣೂರು (ಕೇರಳ): ಜಿಲ್ಲೆಯ ಉಳಿಕ್ಕಲ್ ಪಟ್ಟಣದಲ್ಲಿ ದಾರಿ ತಪ್ಪಿ ಬಂದ ಕಾಡಾನೆಯೊಂದು ಬುಧವಾರ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದ ಘಟನೆ ನಡೆದಿದೆ. ಜನರು ಬೆದರಿ ದಿಕ್ಕಾಪಾಲಾಗಿ ಓದುವ ವೇಳೆ ಮೂವರು ಗಾಯಗೊಂಡಿದ್ದಾರೆ.

Advertisement

ಆನೆಯನ್ನು ಕಂಡು ಗಾಬರಿಗೊಂಡ ಜನರು ಬಚಾವ್ ಆಗಲು ಹರಸಾಹಸ ಪಟ್ಟರು. ಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿರುವ ಅರಣ್ಯಕ್ಕೆ ಆನೆಯನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನೆಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಪ್ರದೇಶದಲ್ಲಿ ಶಾಲೆಗಳು, ಅಂಗಡಿಗಳು ಮತ್ತು ಇತರ ಸಂಸ್ಥೆಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ.

ಆನೆಯಿಂದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಿದ್ದರೂ, ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next