Advertisement

ಆಂಧ್ರದಿಂದ ಮಾರಾಟಕ್ಕೆ ತಂದಿದ್ದ 13 ಕಾಡು ಮೊಲಗಳ ವಶ: ವ್ಯಕ್ತಿ ಬಂಧನ

02:56 PM Oct 05, 2019 | keerthan |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದ ಕದಿರಿಯಿಂದ ಅಕ್ರಮವಾಗಿ ಕಾಡು ಮೊಲಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಜಿಲ್ಲೆಯ ಚಿಂತಾಮಣಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಶನಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ತಾಲೂಕಿನ ಸುನ್ಬರಾಯಪ್ಪಲ್ಲಿ ನಿವಾಸಿ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.

ಇಂದು ಮಧ್ಯಾಹ್ನ ಚಿಂತಾಮಣಿ ನಗರದ ಚೇಳೂರು ವೃತ್ತದಲ್ಲಿ ಚೀಲದಲ್ಲಿ ಗುರುತು ಸಿಗದಂತೆ ಕೋಳಿಗಳ ಮಧ್ಯೆ ಕಾಡು ಮೊಲಗಳನ್ನು ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಾದ ಅಶ್ಚತ್ಥ, ಜಯಚಂದ್ರ ಹಾಗು ಸಿಬ್ಬಂದಿ ದಾಳಿ ನಡೆಸಿ ಮೊಲಗಳನ್ನು ವಶಪಡಿಸಿಕೊಂಡು ಕೈವಾರ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next