Advertisement

Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ

02:00 AM Oct 06, 2024 | Team Udayavani |

ಬೆಳ್ತಂಗಡಿ: ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲಸೊಳಿಕೆ ನಿವಾಸಿ ಕೃಷ್ಣಪ್ಪ ಅವರ ಮನೆಯ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ಅಡಿಕೆ, ಮರಗೆಣಸು ಮುಂತಾದ ಬೆಳೆಗೆ ಹಾನಿ ಮಾಡಿದೆ. ಮನೆಗಳ ಬಳಿ ಓಡಾಡಿ ಜನರಲ್ಲಿ ಭೀತಿ ಮೂಡಿಸಿದೆ.

Advertisement

ಧರ್ಮಸ್ಥಳ ಕೆ.ಎಸ್‌.ಆರ್‌.ಟಿ. ಸಿ. ಬಸ್‌ ನಿಲ್ದಾಣದ ಬಳಿಯ ಕ್ಸೇವಿಯರ್‌ ಅವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಗೆ ಹಾನಿಯುಂಟುಮಾಡಿದೆ. ಇಲ್ಲಿ ಫಸಲು ಬರುವ ಸುಮಾರು ಹತ್ತಕ್ಕೂ ಅಧಿಕ ಅಡಿಕೆ ಮರ, ದೊಡ್ಡ ತೆಂಗಿನ ಮರಗಳನ್ನೂ ಉರುಳಿಸಿದೆ. ಪೈಪ್‌ಗ್ಳನ್ನು ಸಂಪೂರ್ಣವಾಗಿ ಪುಡಿಗೈದಿದ್ದು ಭಾರೀ ನಷ್ಟ ಸಂಭವಿಸಿದೆ.

ನೇರ್ತನೆ ರಸ್ತೆಯ ಪಕ್ಕದಲ್ಲೇ ಕಾಡಾನೆಗಳು ಓಡಾಡುತ್ತಿರುವುದೂ ಜನರಿಗೆ ಆತಂಕ ಮೂಡಿಸಿದೆ. ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತರಾವ್‌ ಅವರ ತೋಟಕ್ಕೆ ಶನಿವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು 60 ಅಡಿಕೆ ಮರ ಹಾಗೂ ಒಂದು ತೆಂಗಿನ ಮರವನ್ನು ಮುರಿದುಹಾಕಿವೆ.

ಹಿಂಡಿನಲ್ಲಿ 6 ಕಾಡಾನೆಗಳಿರುವ ಶಂಕೆಯಿದ್ದು, ತೋಟದಲ್ಲಿ ರುವ ಆನೆಗಳ ಹೆಜ್ಜೆಗಳು ಇದನ್ನು ದೃಢೀಕರಿಸುತ್ತಿವೆ. ಪರಿಸರದಲ್ಲಿ ಒಂಟಿ ಸಲಗ ಸಹಿತ 2ರಿಂದ 3 ಆನೆಗಳಿರುವ ಹಿಂಡು ಆಗಾಗ ಕಂಡು ಬರುತ್ತಿತ್ತು. ಆದರೆ ಈ ಬಾರಿ ಏಕಾಏಕಿ ಆರು ಆನೆಗಳು ಕಂಡುಬಂದಿವೆ ಎಂದು ಸ್ಥಳೀಯರಾದ ಪ್ರಕಾಶ್‌ ನಾರಾಯಣ್‌ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next