Advertisement

Fish ಪದಾರ್ಥ ಮಾಡಿಟ್ಟು ಹೋಗು ಎಂದು ಪತ್ನಿಗೆ ಸೌದೆಯಿಂದ ಗಂಭೀರ ಹಲ್ಲೆ

09:33 PM Jun 29, 2024 | Team Udayavani |

ಸಿದ್ದಾಪುರ: ಮೀನು ಪದಾರ್ಥವನ್ನು ಮಾಡಿಟ್ಟು ಹೋಗು ಎಂದು ಪತ್ನಿಗೆ ಪತಿ ಉರಿಯುತ್ತಿರುವ ಒಲೆಯ ಸೌದೆಯಿಂದ ಹಲ್ಲೆ ಮಾಡಿ, ಕೈ ಮತ್ತು ಮುಖ ಸುಟ್ಟ ಪ್ರಕರಣ ಯಡಮೊಗೆಯಲ್ಲಿ ನಡೆದಿದೆ.

Advertisement

ಯಡಮೊಗೆ ಗ್ರಾಮದ ನೇತ್ರಾವತಿ (24) ಹಲ್ಲೆಗೊಳಗಾದವರು. ಅವರು ಅದೇ ಗ್ರಾಮದ ಜಯರಾಮ ಅವರೊಂದಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ನೇತ್ರಾವತಿ ಅವರು ಜೂ. 27ರಂದು ಹೊಸಂಗಡಿ ಯೂನಿಯನ್‌ ಬ್ಯಾಂಕಿಗೆ ಹೋಗಿ ಧರ್ಮಸ್ಥಳ ಸಂಘದಲ್ಲಿ ಮಾಡಿದ ಹಣ ಡ್ರಾ ಮಾಡಿಕೊಂಡು ತಂದು ಗಂಡನಿಗೆ ನೀಡಿದ್ದರು.

ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದ ನೇತ್ರಾವತಿ ಹತ್ತಿರ ಪತಿ ಜಯರಾಮ ಮೀನು ಪದಾರ್ಥ ಮಾಡಲು ಹೇಳಿದರು. ಅಂಗನವಾಡಿ ಕೇಂದ್ರಕ್ಕೆ ಹೋಗಿ ವಿಟಮಿನ್‌ ಎ ಡ್ರಾಫ್ಸ್ ಹಾಕಿಕೊಂಡು ಬಂದು ಮೀನು ಪದಾರ್ಥ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಕುಪಿತಗೊಂಡ ಪತಿ ಜಯರಾಮ ಅಡುಗೆ ಮನೆಗೆ ತೆರಳಿ ಅಲ್ಲಿ ಉರಿಯುತ್ತಿದ್ದ ಒಲೆಯ ಸೌದೆಯನ್ನು ತೆಗೆದು ನೇತ್ರಾವತಿ ಅವರಿಗೆ ಮನಸೋಇಚ್ಚೆ ಹಲ್ಲೆ ಮಾಡಿದ್ದರು. ಅಲ್ಲದೆ ಉರಿಯುತ್ತಿರುವ ಸೌದೆಯಿಂದ ಕೈ ಮತ್ತು ಕಣ್ಣಿನ ಬಳಿ ಸುಟ್ಟಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋರಗೋಡಿ ಬಂದಾಗ ಅತ್ತೆ ಜಲಜಾ ಅವರು ಅವಳನ್ನು ಬಿಡಬೇಡ, ಮತ್ತೆ ಹೊಡೆಯುವಂತೆ ಜಯರಾಮ ಅವರಿಗೆ ಪ್ರಚೋದನೆ ನೀಡಿದ್ದರು. ಅನಂತರ ಜೀವ ಬೆದರಿಕೆಯನ್ನೂ ಒಡ್ಡಿದ್ದಾಗಿ ನೇತ್ರಾವತಿ ಅವರು ದೂರಿನಲ್ಲಿ ತಿಳಿಸಿದ್ದರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next