Advertisement

1 ಕೋಟಿ ಪರಿಹಾರ, ಉದ್ಯೋಗ: ಹತ Apple sales manager ಪತ್ನಿ ಆಗ್ರಹ

05:47 PM Sep 29, 2018 | Team Udayavani |

ಲಕ್ನೋ : ಉತ್ತರ ಪ್ರದೇಶ ಪೊಲೀಸರು ತನ್ನ ಪತಿ, ಆ್ಯಪಲ್‌ ಸೇಲ್ಸ್‌ ಮ್ಯಾನೇಜರ್‌, ವಿವೇಕ್‌ ತಿವಾರಿ ಅವರನ್ನು ಕೊಂದ ತಾಸುಗಳ ಬಳಿಕ ಪತ್ನಿ ಕಲ್ಪನಾ ತಿವಾರಿ ಅವರು ತನಗೆ ಮತ್ತು ತನ್ನ ಕುಟುಂಬಕ್ಕೆ ನ್ಯಾಯ ನೀಡಲು ”ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕು,  ತನಗೆ 1 ಕೋಟಿ ರೂ. ಪರಿಹಾರ ನೀಡಬೇಕು ಮತ್ತು ತನಗೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು” ಎಂದು ಆಗ್ರಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿದ್ದಾರೆ. 

Advertisement

ರಾಜಧಾನಿ ಲಕ್ನೋದಲ್ಲಿ ನ ಅತ್ಯಂತ ವಿಲಾಸೀ ಪ್ರದೇಶವಾಗಿರುವ ಗೋಮತಿ ನಗರದಲ್ಲಿ ತಪಾಸಣೆಗಾಗಿ ಆದೇಶ ನೀಡಿದ ಹೊರತಾಗಿಯೂ ತನ್ನ ಕಾರನ್ನು ನಿಲ್ಲಿಸದ ಕಾರಣಕ್ಕೆ  ಕಾವಲು ಕರ್ತವ್ಯದಲ್ಲಿದ್ದ  ಉತ್ತರ ಪ್ರದೇಶ ಪೊಲೀಸರು ಗುಂಡು ಹಾರಿಸಿ 38ರ ಹರೆಯದ ಆ್ಯಪಲ್‌ ಸೇಲ್ಸ್‌ ಮ್ಯಾನೆಜರ್‌ ತಿವಾರಿಯನ್ನು ಕೊಂದಿದ್ದರು.

ಮೂಲಗಳ ಪ್ರಕಾರ ಪೊಲೀಸರು ತಡೆಯಲು ಯತ್ನಿಸಿದಾಗ ತಿವಾರಿ ತನ್ನ ಕಾರನ್ನು ಮೂರು ಬಾರಿ ಪೊಲೀಸ್‌ ಮೋಟರ್‌ ಸೈಕಲ್‌ ಮೇಲೆ ಹರಿಸಿಲು ಯತ್ನಿಸಿದ್ದ  ಎಂದು ತಿಳಿದುಬಂದಿದೆ. 

ತನ್ನ ಪತಿಯನ್ನು ಕೊಲ್ಲುವ ಯಾವುದೇ ಅಧಿಕಾರ, ಹಕ್ಕು ಪೊಲೀಸರಿಗಿಲ್ಲ ಎಂದು ಹೇಳಿರುವ ಕಲ್ಪನಾ ತಿವಾರಿ, ಪತಿಯ ತಾಯಿ ಮತ್ತು ತನ್ನ ಇಬ್ಬರು ಮಕ್ಕಳನ್ನು ಬೆಳೆಸಲು ತನಗೆ 1 ಕೋಟಿ ರೂ. ಪರಿಹಾರ ಮತ್ತು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next