Advertisement

ಪತ್ನಿಯಿಂದ ಪತಿ ಕೊಲೆ: ನಾಲ್ವರ ಬಂಧನ

08:25 PM Jul 10, 2021 | Team Udayavani |

ಯಲ್ಲಾಪುರ: ಪತ್ನಿ ತನ್ನ ತಂದೆ-ತಾಯಿ, ಅಣ್ಣನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಚಿಕ್ಕಮಾವಳ್ಳಿಯಲ್ಲಿ ನಡೆದಿದ್ದು, ವಿಷಯ ಆರೋಪಿಗಳ ವಿಚಾರಣೆಯಿಂದ ಬಹಿರಂಗಗೊಂಡಿದ್ದು, ನಾಲ್ವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೃತ ರಾಜೇಶ ನಾಯ್ಕನ ಹೆಂಡತಿ ಶ್ವೇತಾ ರಾಜೇಶ ನಾಯ್ಕ, ರಾಜೇಶನ ಮಾವ ದೀಪಕ ಬುದ್ದಾ ಮರಾಠಿ, ಭಾವ ಗಂಗಾಧರ ದೀಪಕ ಮರಾಠಿ, ಅತ್ತೆ ಯಮುನಾ ದೀಪಕ ಮರಾಠಿ ಎಂದು ಗುರುತಿಸಲಾಗಿದೆ.

Advertisement

ಆರೋಪಿತರು ಚಿಕ್ಕಮಾವಳ್ಳಿಯಲ್ಲಿ ಕೊಲೆ ಮಾಡಿ ಸಾಕ್ಷ್ಯ ನಾಶಮಾಡಿ ಕಾಣೆಯಾಗಿದ್ದಾನೆಂದು ಮೃತನ ಕುಟುಂಬದವರು ದೂರು ನೀಡಿದ್ದರು. ಮೂಲತಃ ಬಳಗಾರದ ಅತ್ತಗಾರಿನ ರಾಜೇಶ ನಾರಾಯಣ ನಾಯ್ಕನನ್ನು ಈತನ ಹೆಂಡತಿ ಶ್ವೇತಾ ಆಸ್ತಿ ವಿಚಾರವಾಗಿ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಈತನು ಮಾವನಮನೆ ಚಿಕ್ಕಮಾವಳ್ಳಿಗೆ ಬಂದಾಗ ಹೆಂಡತಿ, ಅತ್ತೆ, ಮಾವ, ಭಾವ ಆಸ್ತಿ ವಿಚಾರವಾಗಿ ಜಗಳ ತೆಗೆದು ಗುದ್ದಲಿ, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಮೃತದೇಹವನ್ನು ಕಾಡಿನಲ್ಲಿ ಸುಟ್ಟುಹಾಕಿ, ಮೂಳೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಆತನ ಬೈಕ್‌ ಚಪ್ಪಲಿಯನ್ನು ದೇಹಳ್ಳಿಯ ಕಾಡಿನಲ್ಲಿ ಎಸೆದು, ತನಿಖೆಯ ದಿಕ್ಕು ತಪ್ಪಿಸಲು ಈತ ಬೇಟೆಗೆ ಹೋದಾಗ ಕಾಡುಪ್ರಾಣಿಗಳು ತಿಂದಿರಬಹುದೆಂದು ನಂಬಿಸಲು ಯೋಜನೆ ರೂಪಿಸಿದ್ದರು. ಅಲ್ಲದೇ ಈತ ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು. ಪೊಲೀಸರು ಎರಡು ತಂಡ ರಚಿಸಿ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next