Advertisement

ಹೆಂಡ್ತಿ ನನ್ನ ಮಾತೇ ಕೇಳುವುದಿಲ್ಲ ಸರ್‌; ಪೊಲೀಸರ ಬಳಿ ದಡಿಯಾ ಮಹೇಶ್‌

04:08 PM Sep 27, 2018 | |

ಬೆಂಗಳೂರು: ಸರ್‌ ನನ್ನ ಹೆಂಡತಿ ನನ್ನ ಮಾತೇ ಕೇಳುವುದಿಲ್ಲ..ನೀವೇ ಕಂಟ್ರೋಲ್‌ ಮಾಡಬೇಕು..ಇದು  ಶ್ರೀರಾಮಸೇನೆ ಮಹಿಳಾ ಘಟಕದ ಅಧ್ಯಕ್ಷೆ ಯಶಸ್ವಿನಿ ಗೌಡ ಪತಿ ದಡಿಯಾ ಮಹೇಶ್‌ ಪೊಲೀಸರಲ್ಲಿ ಮನವಿ ಮಾಡಿದ ಪರಿ.

Advertisement

ಗುರುವಾರ ಪೊಲೀಸರು ರೌಡಿ ಶೀಟರ್‌ಗಳ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಸಿಬಿ ಡಿಸಿಪಿ ಗಿರೀಶ್‌ ಅವರು ಮಹೇಶ್‌ಗೆ ಎಚ್ಚರಿಕೆ ನೀಡಿ ಹೆಂಡತಿಯನ್ನೂ ಕಂಟ್ರೋಲ್‌ನಲ್ಲಿಡು ಎಂದಿದ್ದಾರೆ. ಈ ವೇಳೆ ಮಹೇಶ್‌ ಅಸಹಾಯಕತೆ ಹೊರ ಹಾಕಿದ್ದು, ಆಕೆಗೆ ನಿಮ್ಮಂಥಹವರೇ ಬುದ್ದಿ ಕಲಿಸಬೇಕು ಎಂದಿದ್ದಾನೆ. 

ಮಹೇಶ್‌ ನಿವಾಸದಲ್ಲಿ ಯಶಸ್ವಿನಿಯ ಫೋಟೋ ಮತ್ತು ರಿವಾಲ್ವರ್‌ ಪತ್ತೆಯಾಗಿದ್ದು , ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ವಾರದ ಹಿಂದೆ ರೌಡಿ ಶೀಟರ್‌ ಆಗಿರುವ ಯಶಸ್ವಿನಿ ಶ್ರೀರಾಮ ಸೇನೆಯ ಮಹಿಳಾ ಘಟಕಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಭಾರಿ ಸುದ್ದಿಯಾಗಿದ್ದಳು. 

Advertisement

Udayavani is now on Telegram. Click here to join our channel and stay updated with the latest news.

Next