Advertisement

3 ಸರ್ಜಿಕಲ್‌ ದಾಳಿಗಳನ್ನು ಯಾಕೆ ಬಹಿರಂಗ ಪಡಿಸಿಲ್ಲ;ರಾಜನಾಥ್‌ ಸಿಂಗ್‌

04:28 PM Dec 02, 2018 | Team Udayavani |

ಹೊಸದಿಲ್ಲಿ: ಯುಪಿಎ ಸರ್ಕಾರದ ಅವಧಿಯಲ್ಲೂ 3 ಸರ್ಜಿಕಲ್‌ ದಾಳಿ ನಡೆಸಿದ್ದೇವೆ ಎನ್ನುತ್ತಾರೆ, ಆದರೆ ಅವರುಗಳನ್ನು ಯಾಕೆ ಅದನ್ನು ಬಹಿರಂಗಪಡಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ರಾಹುಲ್‌ ಗಾಂಧಿ ಅವರಿಗೆ ಪ್ರಶ್ನಿಸಿದ್ದಾರೆ.

Advertisement

ಸೇನೆಯ ಶೌರ್ಯ ಮತ್ತು ಪ್ರಯತ್ನವನ್ನು ಯಾಕೆ ಸಾರ್ವಜನಿಕರಿಗೆ ತಿಳಿಸಲಿಲ್ಲ. ಜನರಿಗೆ ಸೇನೆಯ ಸಾಧನೆಗಳನ್ನು ತಿಳಿದುಕೊಳ್ಳುವ ಹಕ್ಕು ಇದೆ. ಅವರಿಗೆ ಅದು ಈಗ ಏಕಾಏಕಿ ಅರಿವಾಗುತ್ತಿದೆ ಯಾಕೆ ಎಂದು ರಾಜ್‌ನಾಥ್‌ ಸಿಂಗ್‌ ಪ್ರಶ್ನಿಸಿದರು. 

ರಾಹುಲ್‌ ಗಾಂಧಿ ಅವರು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದ ವೇಳೆ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರವಿದ್ದಾಗ 3 ಸರ್ಜಿಕಲ್‌ ದಾಳಿಗಳು ನಡೆದಿದ್ದು, ಮೋದಿ ಯವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದರು.

Advertisement

ಸೇನೆ ನಡೆಸಿದ ಸರ್ಜಿಕಲ್‌ ದಾಳಿ ಯನ್ನು ಪ್ರಧಾನಿ ಮೋದಿ ಅವರು ತಮ್ಮ ರಾಜಕೀಯ ಸೊತ್ತು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್‌ ಹೇಳಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next