Advertisement

ಈಗೇಕೆ ಸಿದ್ದುಗೆ ಕನ್ನಡ ಧ್ವಜ ನೆನಪು?: ಸಿ.ಟಿ.ರವಿ

10:58 PM Nov 06, 2019 | Team Udayavani |

ರಾಯಚೂರು: 1983ರಿಂದ ರಾಜಕೀಯದಲ್ಲಿದ್ದು, ವಿವಿಧ ಅ ಧಿಕಾರ ಅನುಭವಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ವಿಚಾರ ಈಗ ಮಾತ್ರ ಏಕೆ ನೆನಪಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ.

Advertisement

ಈ ಹಿಂದೆ ವೀರಶೈವ- ಲಿಂಗಾಯತ ವಿಭಜನೆ ನಾಟಕ ಆಡಿದರು. ಈಗ ಕನ್ನಡ ಧ್ವಜ ನಾಟಕ ಶುರು ಮಾಡಿದ್ದು, ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಅವರಿಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ತಾವೇ ಸಚಿವ, ಡಿಸಿಎಂ, ಸಿಎಂ ಆಗಿದ್ದಾಗ ಏಕೆ ಪ್ರತ್ಯೇಕ ಧ್ವಜ ರಚಿಸಲಿಲ್ಲ. ಸಂವಿಧಾನ ರಚನೆಯಾದಾಗ ದೇಶದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌. ಆಗ ಪ್ರತ್ಯೇಕ ಧ್ವಜ ಮಾಡಬಹುದಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next