Advertisement

ರಾಯುಡುಗೆ ಅವಕಾಶ ನೀಡಲಾಗಿತ್ತು. ಯಾವುದೇ ಮೋಸವಾಗಿಲ್ಲ: ಪ್ರಸಾದ್‌

09:10 AM Jul 22, 2019 | keerthan |

ಮುಂಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಅಂಬಾಟಿ ರಾಯುಡು ವಿಶ್ವಕಪ್‌ ಗೆ ಆಯ್ಕೆ ಆಗದೇ ಇರುವುದಕ್ಕೆ ಅಸಮಧಾನಗೊಂಡಿದ್ದರು. ಆದರೆ ರಾಯುಡು ವಿಶ್ವಕಪ್‌ ಆಯ್ಕೆ ಪ್ರಕ್ರಿಯೆಯ ಬಗೆಗಿನ ಅಸಮಧಾನಕ್ಕೆ ಬಿಸಿಸಿಐ ಉತ್ತರಿಸಿದೆ.

Advertisement

ಇಂದು ಮುಂಬೈನಲ್ಲಿ ವೆಸ್ಟ್‌ ಇಂಡೀಸ್ ಸರಣಿಗೆ ತಂಡ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್‌, ನಾವು ರಾಯುಡು ಅವರ ಟಿ ಟ್ವೆಂಟಿ ಮತ್ತು ಐಪಿಎಲ್‌ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿದ್ದೆವು. ಆದರೆ ಅವರು ಫಿಟ್ನೆಸ್‌ ಟೆಸ್ಟ್‌ ನಲ್ಲಿ ಪಾಸಾಗಲಿಲ್ಲ. ಅವರನ್ನು ಫಿಟ್ನೆಸ್‌ ಪ್ರೋಗ್ರಾಮ್‌ ಗೆ ಕಳುಹಿಸಲಾಗಿತ್ತು. ಆದರೆ ನಂತರ ತಂಡವನ್ನು ಸಂಯೋಜಿಸುವಾಗಿ ಅವರು ಅದಕ್ಕೆ ಫಿಟ್‌ ಆಗಲಿಲ್ಲ. ನಾವು ಯಾವುದೇ ರೀತಿಯ ತಾರತಮ್ಯ ಮಾಡಲಿಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next