Advertisement

ವಾರಾಣಸಿಯಲ್ಲಿ ಸ್ಪರ್ಧಿಸಿಲ್ಲವೇಕೆ?

02:25 AM May 01, 2019 | Team Udayavani |

ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕಿದ್ದೇಕೆ ಎಂಬ ಪ್ರಶ್ನೆ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

Advertisement

‘ನಾನೇನೂ ಹಿಂದೆ ಸರಿದಿಲ್ಲ. ಎಲ್ಲ ಹಿರಿಯ ನಾಯಕರು ಮತ್ತು ಉತ್ತರಪ್ರದೇಶದಲ್ಲಿನ ಸಹೋದ್ಯೋಗಿಗಳ ಸಲಹೆಯನ್ನು ಕೇಳಿದ್ದೆ. ನನಗೆ 41 ಸೀಟುಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಹೀಗಾಗಿ ಕೇವಲ ಒಂದು ಕ್ಷೇತ್ರದತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂಬ ಭಾವನೆ ಬಂದ ಕಾರಣ, ವಾರಾಣಸಿಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ಜತೆಗೆ, ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳೂ ನಾನು ಅವರ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಬೇಕೆಂದು ಬಯಸುತ್ತಿದ್ದಾರೆ. ಹೀಗಿರುವಾಗ ನಾನು ಒಂದೇ ಕ್ಷೇತ್ರದ ಕಡೆಗೆ ಗಮನಹರಿಸಿದರೆ, ಅವರೆಲ್ಲರಿಗೂ ನಿರಾಸೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next