Advertisement

ನನ್ನ ಹಣ ಸ್ವೀಕರಿಸುವಂತೆ ಮೋದಿ ಬ್ಯಾಂಕಿಗೆ ಏಕೆ ಹೇಳುತ್ತಿಲ್ಲ ? ಮಲ್ಯ

05:40 AM Feb 14, 2019 | udayavani editorial |

ಲಂಡನ್‌ : ‘ಕಿಂಗ್‌ಫಿಶರ್‌ ಬ್ಯಾಂಕ್‌ ಸಾಲ ತೀರಿಸಲು ನಾನು ಕೊಡಲು ಮುಂದಾಗಿರುವ ಹಣವನ್ನು ಸ್ವೀಕರಿಸುವಂತೆ ಪ್ರಧಾನಿ ಮೋದಿ ಬ್ಯಾಂಕುಗಳಿಗೆ ಏಕೆ ಸೂಚನೆ ನೀಡುತ್ತಿಲ್ಲ? ‘ ಎಂದು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್‌ ಮಲ್ಯ ಪ್ರಶ್ನಿಸಿದ್ದಾರೆ. 

Advertisement

‘ಪ್ರಧಾನಿ ನರೇಂದ್ರ ಮೋದಿ ಅವರೋರ್ವ ಚತುರ ಮಾತುಗಾರ, ಭಾಷಣಕಾರ; ಆದರೆ ನಾನು ಕೊಡುವ ಹಣವನ್ನು ಸ್ವೀಕರಿಸುವಂತೆ ಅವರು ಬ್ಯಾಂಕುಗಳಿಗೆ ಯಾಕೆ ಸೂಚನೆ ನೀಡುತ್ತಿಲ್ಲ ‘ ಎಂದು ಮಲ್ಯ ಪ್ರಶ್ನಿಸಿದರು.

‘ಲೋಕಸಭೆಯಲ್ಲಿ ಕೊನೆ ದಿನದಂದು ಪ್ರಧಾನಿ ಮೋದಿ ಮಾಡಿರುವ ಭಾಷಣವನ್ನು ನನ್ನ ಗಮನಕ್ಕೆ ತರಲಾಗಿದೆ. ತಮ್ಮ ಭಾಷಣದಲ್ಲಿ ಮೋದಿ ಅವರು ಹೆಸರು ಬಹಿರಂಗಪಡಿಸದ ವ್ಯಕ್ತಿಯೋರ್ವ 9,000 ಕೋಟಿ ರೂ. ಗಳೊಂದಿಗೆ ದೇಶದಿಂದ ಪಲಾಯನ ಮಾಡಿರುವುದಾಗಿ ಹೇಳಿದ್ದಾರೆ. ಆ ವ್ಯಕ್ತಿ ನಾನೇ ಎಂಬುದನ್ನು ತಿಳಿಯಬಲ್ಲೆ’ ಎಂದು ಮಲ್ಯ ತಮ್ಮ ಟ್ವೀಟ್‌ ನಲ್ಲಿ ಬರೆದಿದ್ದಾರೆ. 

ಬ್ರಿಟನ್‌ನ ಗೃಹ ಸಚಿವಾಲಯ ಕಾರ್ಯಾಲಯ ಕಳೆದ ಫೆ.4ರಂದು ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಅನುಮತಿ ನೀಡುವ ಆದೇಶಕ್ಕೆ ಸಹಿ ಹಾಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next