Advertisement

ಕರ್ನಾಟಕಕ್ಕೆ 52 ಇಂಚಿನ ಎದೆ ಮಿಡಿಯಲಿಲ್ಲ ಏಕೆ?

11:23 PM Oct 01, 2019 | Team Udayavani |

ಬೆಂಗಳೂರು: ಬಿಹಾರ ರಾಜ್ಯದ ಪ್ರವಾಹಕ್ಕೆ ಮಾತ್ರ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾರತಮ್ಯ ನೀತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement

ಬಿಹಾರದ ಜನತೆಗೆ ಮಿಡಿದಿರುವ ಪ್ರಧಾನಿ ಅವರ 52 ಇಂಚಿನ ಎದೆ ಕರ್ನಾಟಕಕ್ಕೆ ಮಾತ್ರ ಮಿಡಿದಿಲ್ಲ ಏಕೆ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಬೃಹತ್‌ ಪ್ರಮಾಣದಲ್ಲಿ ನಷ್ಟವುಂಟಾಗಿದ್ದು, ನೆರೆ ಸಂತ್ರಸ್ತರ ಬದುಕು ದುಸ್ಥರವಾಗಿದೆ. ಸಂತ್ರಸ್ತರ ನೋವಿನ ಕಣ್ಣೀರನ್ನು ಕಂಡು ಮೋದಿ ಅವರ 52 ಇಂಚಿನ ಎದೆ ಕಲ್ಲುಬಂಡೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next