Advertisement

ಆಯ್ಕೆ ಸಮಿತಿ ಜತೆ ಚರ್ಚಿಸದೆ ಆಲೋಕ್‌ಗೆ ರಜೆ ಕೊಟ್ಟದ್ದೇಕೆ: ಸುಪ್ರೀಂ

12:05 PM Dec 06, 2018 | Team Udayavani |

ಹೊಸದಿಲ್ಲಿ : ಸಿಬಿಐ ವರ್ಸಸ್‌ ಸಿಬಿಐ ‘ಬೆಕ್ಕುಗಳ ಕಾದಾಟ’ದಲ್ಲಿ  ಶಾಮೀಲಾಗಿದ್ದ ಆಲೋಕ್‌ ವರ್ಮಾ ಅವರನ್ನು ರಜೆಯಲ್ಲಿ ಕಳಿಸುವ ಮುನ್ನ ಆಯ್ಕೆ ಸಮಿತಿಯ ಜತೆಗೆ ಏಕೆ ಸಮಾಲೋಚಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.

Advertisement

ಆಲೋಕ್‌ ವರ್ಮಾ ಮತ್ತು ಸಿಬಿಐ ನಂಬರ್‌ 2 ಆಗಿರುವ ರಾಕೇಶ್‌ ಆಸ್ಥಾನಾ ಅವರ ಒಳಜಗಳದಿಂದ ಸಿಬಿಐ ಘನತೆ, ಗೌರವ, ಪ್ರತಿಷ್ಠೆ ಮಣ್ಣುಪಾಲಾಗಿತ್ತು ಎಂದು ಈ ಮೊದಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.

ಸಿಬಿಐ ಮುಖ್ಯಸ್ಥ ಆಲೋಕ್‌ ವರ್ಮಾ ಅವರ ಅಧಿಕಾರಗಳನ್ನು ಕಿತ್ತು ಹಾಕುವ ಮುನ್ನ ಆಯ್ಕೆ ಸಮಿತಿಯನ್ನು ಸಮಾಲೋಚಿಸಬೇಕಿತ್ತು; ಆದರೆ ಸರಕಾರ ಯಾಕೆ ಹಾಗೆ ಮಾಡದೆ ಲೋಪ ಎಸಗಿತು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಪ್ರಶ್ನಿಸಿತು. 

ವರ್ಮಾ ಮತ್ತು ಆಸ್ಥಾನಾ ನಡುವಿನ ಜಗಳ ರಾತ್ರೋರಾತ್ರಿ ನಡೆದುದಲ್ಲ; ಅದಕೆ ದೀರ್ಘ‌ ಇತಿಹಾಸವೂ ಇದ್ದಿರಬಹುದು. ಆದುದರಿಂದ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮುನ್ನ ಸರಕಾರ ಆಯ್ಕೆ ಸಮಿತಿಯೊಡನೆ ಸಮಾಲೋಚಿಸಬೇಕಿತ್ತು ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next