Advertisement

ನಿಜವಾದ ಎನ್‌ಸಿಪಿ ಯಾರದ್ದು?:ಇಂದು ಸುಪ್ರೀಂ ಕೋರ್ಟಲ್ಲಿ ವಿಚಾರಣೆ

12:21 AM Feb 19, 2024 | Team Udayavani |

ಹೊಸದಿಲ್ಲಿ: ಅಜಿತ್‌ ಪವಾರ್‌ ಅವರ ಬಣವೇ ನಿಜವಾದ ಎನ್‌ಸಿಪಿ ಎಂದು ಚುನಾವಣ ಆಯೋಗದ ಆದೇಶ ಪ್ರಶ್ನಿಸಿ ಶರದ್‌ ಪವಾರ್‌ ಬಣ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ನ್ಯಾ| ಸೂರ್ಯಕಾಂತ್‌, ನ್ಯಾ| ದೀಪಂಕರ್‌ ದತ್ತಾ ಮತ್ತು ನ್ಯಾ| ಕೆ.ವಿ.ವಿಶ್ವನಾಥನ್‌ ಅವರು ಇರುವ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.

Advertisement

ಫೆ. 6ರಂದು ಚುನಾವಣ ಆಯೋಗ ಅಜಿತ್‌ ಪವಾರ್‌ ಬಣವೇ ನಿಜವಾಗಿರುವ ಎನ್‌ಸಿಪಿ ಎಂದು ಆದೇಶ ನೀಡಿತ್ತು. ಇದರ ಜತೆಗೆ ಫೆ. 15ರಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಕೂಡ ಅದೇ ರೀತಿಯ ನಿರ್ಣಯ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಶರದ್‌ ಪವಾರ್‌ ಬಣ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next