Advertisement

ಪಿಬಿಎಲ್‌ ಆಡದಿರಲು ನಿರ್ಧರಿಸಿದ ಕೆ. ಶ್ರೀಕಾಂತ್‌

12:50 AM Nov 26, 2019 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಪಂದ್ಯಾವಳಿಯಿಂದ (ಪಿಬಿಎಲ್‌) ಈಗಾಗಲೇ ಸೈನಾ ನೆಹ್ವಾಲ್‌ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಸಾಲಿಗೆ ಈಗ ಕೆ. ಶ್ರೀಕಾಂತ್‌ ಕೂಡ ಸೇರಿದ್ದಾರೆ.

Advertisement

2020ರ ಟೋಕಿಯೊ ಒಲಿಂಪಿಕ್ಸ್‌ನತ್ತ ಹೆಚ್ಚಿನ ಗಮನ ನೀಡುವ ಸಲುವಾಗಿ ಪಿಬಿಎಲ್‌ನಲ್ಲಿ ತಾನು ಆಡದಿರುವ ತೀರ್ಮಾನಕ್ಕೆ ಬಂದಿದ್ದೇನೆ ಎಂಬುದಾಗಿ ಶ್ರೀಕಾಂತ್‌ ತಿಳಿಸಿದ್ದಾರೆ. 5ನೇ ಪಿಬಿಎಲ್‌ ಪಂದ್ಯಾವಳಿ ಜ. 20ರಿಂದ ಫೆ. 9ರ ತನಕ ನಡೆಯಲಿದೆ.

“ಮುಂದಿನ ವರ್ಷ ಭಾರೀ ಸವಾಲುಗಳಿವೆ. ಇದು ಒಲಿಂಪಿಕ್ಸ್‌ ವರ್ಷ. ಸಾಲು ಸಾಲು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿವೆ. ಹೀಗಾಗಿ ಪಿಬಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ’ ಎಂಬುದಾಗಿ ಶ್ರೀಕಾಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next