Advertisement

56 ಇಂಚಿನ ಎದೆ ಎಲ್ಲಿದೆ? :ಯೋಧನ ಹತ್ಯೆ ಕುರಿತು ಪ್ರಧಾನಿಗೆ ಕಾಂಗ್ರೆಸ್

12:38 PM Sep 20, 2018 | |

ಹೊಸದಿಲ್ಲಿ:  ಬಿಎಸ್‌ಎಫ್ ಯೋಧ ನರೇಂದ್ರ ಕುಮಾರ್‌ರನ್ನು ಪಾಕ್‌ ಸೈನಿಕರು  ಕತ್ತು ಸೀಳಿ ಹತ್ಯೆ ಮಾಡಿರುವ ಕುರಿತು ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದ್ದು 56 ಇಂಚಿನ ಎದೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ  ಅವರು 56 ಇಂಚಿನ ಎದೆ ಎಲ್ಲಿದೆ? ಕೆಂಪು ಕಣ್ಣು ಎಲ್ಲಿ ಹೋಯಿತು? 1 ತಲೆಗೆ ಬದಲಾಗಿ 10 ತಲೆ ತರುವವರು ಎಲ್ಲಿದ್ದಾರೆ ಎಂದು ತೀವ್ರ ವಾಗಾœಳಿ ನಡೆಸಿದರು.

ಸರ್ಕಾರ ಭ್ರಷ್ಟರ ಕುರಿತಾಗಿ ಚಿಂತಿಸುತ್ತಿದೆ ಹೊರತಾಗಿ ಸೈನಿಕರ ಕುರಿತಾಗಿ ಅಲ್ಲ. ಮೋದಿ ಸೈನಿಕರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಹೊರತೂ ಅವರ ಭದ್ರತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.

ಮೋದಿ ಜಿ ನಿಮ್ಮ ಆತ್ಮಸಾಕ್ಷಿ ಎಲ್ಲಿದೆ?ಸರ್ಕಾರ ಏನು ಮಾಡುತ್ತಿದೆ? ನೀವು ದೇಶದ ಜನತೆಗೆ ಉತ್ತರ ನೀಡಬೇಕು ಎಂದರು. 

ಇದೇ ಪ್ರಶ್ನೆಯನ್ನೂ ಟ್ವೀಟರ್‌ನಲ್ಲಿ ಪ್ರಧಾನಿ ಮೋದಿ ಅವರಲ್ಲಿ ಸುರ್ಜೇವಾಲಾ  ಪ್ರಶ್ನಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next