ವಿಪಕ್ಷಗಳ ಮಹಾಮೈತ್ರಿಯ ಸರಕಾರದ ಕುರಿತು ‘ಕಿಚಡಿ ಸರಕಾರ’ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ತಿರುಗೇಟು ನೀಡಿದ್ದಾರೆ.
‘ಆರೋಗ್ಯ ಹದಗೆಟ್ಟಾಗ ಎಲ್ಲರಿಗೂ ಕಿಚಡಿಯೇ ಬೇಕಾಗುತ್ತದೆ’ ಎಂದು ತರೂರ್ ಹೇಳಿದ್ದಾರೆ. ಬಿಜೆಪಿಗೆ ನಿರ್ಗಮನದ ಹಾದಿ ತೋರಿಸುವ ಮೂಲಕ ದೇಶದ ರಾಜಕೀಯ ಅನಾರೋಗ್ಯವನ್ನು ದೇಶದ ಜನತೆಯೇ ಶಮನ ಮಾಡಲಿದ್ದಾರೆ ಎಂದೂ ಹೇಳುವ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.
Advertisement