Advertisement

Eliminator ಪಂದ್ಯಕ್ಕೆ ಶುಭ ಕೋರಿದ ಮಲ್ಯ; ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ…

08:59 AM May 22, 2024 | Team Udayavani |

ಲಂಡನ್ : ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ ಬೆಂಗಳೂರು ಬುಧವಾರ ನಿರ್ಣಾಯಕ ಎಲಿಮಿನೇಟರ್‌ ಪಂದ್ಯ ಆಡುತ್ತಿದೆ. ದೇಶ ಬಿಟ್ಟು ಪರಾರಿಯಾಗಿರುವ ಮದ್ಯ ದೊರೆ, ಆರ್ ಸಿಬಿ ತಂಡದ ಮಾಜಿ ಮಾಲಕ ವಿಜಯ್ ಮಲ್ಯ ತಂಡಕ್ಕೆ ಶುಭ ಕೋರಿದ್ದಾರೆ.

Advertisement

ಎಕ್ಸ್ ಪೋಸ್ಟ್ ಮಾಡಿರುವ ಮಲ್ಯ ”ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ, ವಿರಾಟ್‌ ಕೊಹ್ಲಿ ಅವರಿಗೆ ಬಿಡ್ ಮಾಡಿದಾಗ, ನಾನು ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಆಂತರಾತ್ಮ ಹೇಳಿತು. ಐಪಿಎಲ್ ಟ್ರೋಫಿಗೆ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಪ್ರವೃತ್ತಿ ಹೇಳುತ್ತದೆ. ಮುಂದೆ ಮತ್ತು ಮೇಲಕ್ಕೆ.ಶುಭವಾಗಲಿ” ಎಂದು ಹಾರೈಸಿದ್ದಾರೆ.

ಆರ್ ಸಿಬಿ ಚೆನ್ನೈ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಗೆದ್ದ ಬಳಿಕವೂ ಮಲ್ಯ ಸಂತಸ ಹಚ್ಚಿಕೊಂಡಿದ್ದರು. ”ಅಗ್ರ ನಾಲ್ಕಕ್ಕೆ ಅರ್ಹತೆ ಗಳಿಸಿ ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕಾಗಿ ಆರ್‌ಸಿಬಿಗೆ ಹೃತ್ಪೂರ್ವಕ ಅಭಿನಂದನೆಗಳು. ಉತ್ತಮವಾದ ನಿರ್ಣಯ ಮತ್ತು ಕೌಶಲ್ಯವು ನಿರಾಶಾದಾಯಕ ಆರಂಭದ ನಂತರ ಗೆಲುವಿನ ಆವೇಗವನ್ನು ಸೃಷ್ಟಿಸಿದೆ. ಟ್ರೋಫಿಯ ಕಡೆಗೆ ಮುಂದಕ್ಕೆ ಮತ್ತು ಮೇಲಕ್ಕೆ” ಎಂದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

Advertisement
Advertisement

Udayavani is now on Telegram. Click here to join our channel and stay updated with the latest news.

Next