Advertisement

MUDA Case: ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಏನಾಗಲಿದೆ: ಭಾರೀ ಕುತೂಹಲ

01:30 AM Sep 25, 2024 | Team Udayavani |

ಬೆಂಗಳೂರು: ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿರುವುದರಿಂದ ಬುಧವಾರ ಈ ಸಂಬಂಧದ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

Advertisement

ಮುಡಾ ಹಗರಣ ಸಂಬಂಧ ಆಗಸ್ಟ್‌ನಲ್ಲಿ ಮೈಸೂರಿನ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ವಾದ-ಪ್ರತಿವಾದ ಆಲಿಸಿ ಸೆ. 25ರಂದು ಆದೇಶ ಕಾಯ್ದಿರಿಸಿತ್ತು.
ಈ ಮಧ್ಯೆ ಹೈಕೋರ್ಟ್‌ನಲ್ಲಿ ಇದೇ ಪ್ರಕರಣದ ವಿಚಾರಣೆ ಇದ್ದುದರಿಂದ ಕೆಳಹಂತದ ನ್ಯಾಯಲಯದ ಆದೇಶಕ್ಕೆ ತಡೆ ಇತ್ತು.

ಆದರೆ ಮಂಗಳವಾರ ಹೈಕೋರ್ಟ್‌ ಸಿಎಂ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನು ಮತಿ ನೀಡಿರುವುದು ಸರಿಯಾಗಿದೆ ಎಂದು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ತೀರ್ಪಿನ ಪ್ರತಿಯನ್ನು ಅರ್ಜಿದಾರ ಪರ ವಕೀಲರು ಮಂಗಳ ವಾರವೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೀಗಾಗಿ ಬುಧವಾರ ಜನ ಪ್ರತಿನಿಧಿಗಳ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.

ಕಾನೂನು ಸಮರಕ್ಕೆ ಸಿದ್ಧ: ಅರ್ಜಿದಾರರು
ಹೈಕೋರ್ಟ್‌ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ಅರ್ಜಿದಾರರು ಮುಂದಿನ ಹಂತದ ಕಾನೂನು ಸಮರಕ್ಕೂ ಸಿದ್ಧ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೇವಿ ಯಟ್‌ ಸಲ್ಲಿಸಿದ್ದೇವೆ. ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿ ಕೊಂಡಿ ದ್ದೇವೆ. ಮುಡಾ ಪ್ರಕರಣದ ವಿಚಾ ರಣೆಗೆ ಯಾವುದೇ ಅಡೆತಡೆ ಇರಲಿಲ್ಲ. ಹೈಕೋರ್ಟ್‌ ವಿಚಾರಣೆ ಯಿಂದಾಗಿ ಒಂದಿಷ್ಟು ಕಾಲ ಮುಂದೂಡಿಕೆ ಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next