Advertisement
ಮುಡಾ ಹಗರಣ ಸಂಬಂಧ ಆಗಸ್ಟ್ನಲ್ಲಿ ಮೈಸೂರಿನ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಾದ-ಪ್ರತಿವಾದ ಆಲಿಸಿ ಸೆ. 25ರಂದು ಆದೇಶ ಕಾಯ್ದಿರಿಸಿತ್ತು.ಈ ಮಧ್ಯೆ ಹೈಕೋರ್ಟ್ನಲ್ಲಿ ಇದೇ ಪ್ರಕರಣದ ವಿಚಾರಣೆ ಇದ್ದುದರಿಂದ ಕೆಳಹಂತದ ನ್ಯಾಯಲಯದ ಆದೇಶಕ್ಕೆ ತಡೆ ಇತ್ತು.
ಹೈಕೋರ್ಟ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ಅರ್ಜಿದಾರರು ಮುಂದಿನ ಹಂತದ ಕಾನೂನು ಸಮರಕ್ಕೂ ಸಿದ್ಧ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಕೇವಿ ಯಟ್ ಸಲ್ಲಿಸಿದ್ದೇವೆ. ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿ ಕೊಂಡಿ ದ್ದೇವೆ. ಮುಡಾ ಪ್ರಕರಣದ ವಿಚಾ ರಣೆಗೆ ಯಾವುದೇ ಅಡೆತಡೆ ಇರಲಿಲ್ಲ. ಹೈಕೋರ್ಟ್ ವಿಚಾರಣೆ ಯಿಂದಾಗಿ ಒಂದಿಷ್ಟು ಕಾಲ ಮುಂದೂಡಿಕೆ ಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.