Advertisement

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್

11:00 AM Jul 06, 2024 | Team Udayavani |

ಮುಂಬೈ: ನರೇಂದ್ರ ಮೋದಿ ಅವರ ಸರಕಾರ ಮುಂದುವರಿಯುವುದಿಲ್ಲ, ಇನ್ನೂ ಅಲೆಗಳು ರಾಹುಲ್ ಗಾಂಧಿ ಅವರ ಪರವಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂಜಯ್ ರಾವತ್, “ಈ ಸರಕಾರ ಮುಂದುವರಿಯುವುದಿಲ್ಲ, ನಾನು ಈ ಹಿಂದೆಯೂ ಹೇಳಿದ್ದೇನೆ, ಅಲೆಗಳು ಇನ್ನೂ ರಾಹುಲ್ ಗಾಂಧಿ ಪರವಾಗಿವೆ ಮತ್ತು ರಾಜ್ಯಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಘಟನೆಗಳು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಮನಸ್ಸಿನಲ್ಲಿವೆ ಎಂದು ಹೇಳಿದರು.

ನರೇಂದ್ರ ಮೋದಿಯವರ ಸರಕಾರವು ಊರುಗೋಲಲ್ಲಿ ಕೆಲಸ ಮಾಡುತ್ತಿದೆ. ಲಾಲು ಯಾದವ್ ಅವರು ಹೇಳಿದ್ದು ಸರಿಯಾಗಿದೆ ಎಂದು ರಾವತ್ ಹೇಳಿದ್ದಾರೆ.

ಆರ್‌ಜೆಡಿಯ 28 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ್ದ ಲಾಲು ಯಾದವ್, ‘ಮುಂದಿನ ಆಗಸ್ಟ್ ನಲ್ಲಿ ಕೇಂದ್ರ ಸರಕಾರ ಪತನಗೊಳ್ಳಲಿದೆ. , ಸಂಭಾವ್ಯ ಮುಂದಿನ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ಸದಸ್ಯರಿಗೆ ಕರೆ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next