Advertisement

White Paper ಹೊರತರಲು ಕಾರಣವೇನು?; ಮತ್ತೆ ಕಾಂಗ್ರೆಸ್ ವಿರುದ್ಧ ನಿರ್ಮಲಾ ಕಿಡಿ

04:33 PM Feb 10, 2024 | Team Udayavani |

ಹೊಸದಿಲ್ಲಿ: ”ಸಾಧಿಸಿದ್ದನ್ನೆಲ್ಲ ಹಾಳು ಮಾಡುವ ಪಾಂಡಿತ್ಯ ಕಾಂಗ್ರೆಸ್‌ಗೆ ಇದೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ ಮತ್ತೆ ಕಿಡಿ ಕಾರಿದ್ದಾರೆ.

Advertisement

ರಾಜ್ಯಸಭಾ ಕಲಾಪದಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ ಕುರಿತ ಅಲ್ಪಾವಧಿಯ ಚರ್ಚೆಗೆ ಉತ್ತರಿಸುತ್ತಾ,”10 ವರ್ಷಗಳ ಯುಪಿಎ ಆಡಳಿತದಲ್ಲಿ ಹಣದುಬ್ಬರವನ್ನು ನಿರ್ವಹಿಸುವಾಗ ಹಿಂದಿನ ಸರಕಾರದ ಸಾಧನೆಗಳನ್ನು ಹಾಳುಮಾಡುವ ಕಲೆಯನ್ನು ಹಳೆಯ ಪಕ್ಷವು ಕರಗತ ಮಾಡಿಕೊಂಡಿತ್ತು” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2004-2014ರ ಅವಧಿಯಲ್ಲಿ ಆರ್ಥಿಕತೆಯ ದುರುಪಯೋಗ ಮಾಡಿಕೊಳ್ಳಲಾಗಿತ್ತು. ಮೋದಿ ನೇತೃತ್ವದ ಸರಕಾರವು ಆರ್ಥಿಕತೆಯನ್ನು ಮರಳಿ ಹಳಿಗೆ ತರಲು 10 ವರ್ಷಗಳ ಕಾಲ ಶ್ರಮಿಸಿತು. ಭಾರತವನ್ನು ‘ಫ್ರೇಜಿಲ್ ಫೈವ್’ ನಿಂದ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಗೆ ತಂದಿತು. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಸರಕಾರದ ಕೊನೆಯ ವರ್ಷದಲ್ಲಿ ಹಣದುಬ್ಬರ ದರವು ಶೇಕಡಾ 4 ಕ್ಕಿಂತ ಕಡಿಮೆ ಇತ್ತು, ಆದರೆ 10 ವರ್ಷಗಳ ಯುಪಿಎ ಆಡಳಿತದಲ್ಲಿ ಇದು ಗಣನೀಯವಾಗಿ ಹೆಚ್ಚಿತ್ತು ಎಂದು ಮತ್ತೆ ಆರೋಪಿಸಿದರು.

ಶ್ವೇತಪತ್ರ ಹೊರತರಲು ಕಾರಣಗಳನ್ನು ನೀಡಿದ ಸಚಿವೆ ನಿರ್ಮಲಾ, ”ಈ ಹಿಂದೆ ಇದೇ ರೀತಿಯ ಕ್ರಮ ಕೈಗೊಂಡಿದ್ದರೆ ಸಂಸ್ಥೆಗಳು, ಹೂಡಿಕೆದಾರರು ಮತ್ತು ಜನರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದಿತ್ತು. ಚುನಾಯಿತ ಸರಕಾರವಾಗಿ, ಯುಪಿಎ ಆಡಳಿತದಲ್ಲಿ ಆರ್ಥಿಕತೆಯ ನೈಜ ಚಿತ್ರಣ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮೋದಿ ಸರಕಾರ ಕೈಗೊಂಡ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಸಂಸತ್ತಿಗೆ ತಿಳಿಸುವುದು ಕಡ್ಡಾಯವಾಗಿತ್ತು” ಎಂದು ಹೇಳಿದರು.

Advertisement

ಭಾರತಕ್ಕೆ ಸ್ವಚ್ಛ ಮತ್ತು ಜವಾಬ್ದಾರಿಯುತ ಆಡಳಿತದ ಅಗತ್ಯವಿದೆಯೇ ಹೊರತು ಸಂವಿಧಾನೇತರ ಸಂಸ್ಥೆಯ ಮೂಲಕ ಆಡಳಿತವಲ್ಲ ಎಂದು ಸೋನಿಯಾ ಗಾಂಧಿ ನೇತೃತ್ವದ ಹಿಂದಿನ ರಾಷ್ಟ್ರೀಯ ಸಲಹಾ ಮಂಡಳಿಯ ಕುರಿತು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next